ಇರಾ: ಸಿಡಿಲು ಬಡಿದು ಮನೆಗೆ ಹಾನಿ

Update: 2019-05-20 09:55 GMT

ಕೊಣಾಜೆ: ಇರಾ ಗ್ರಾಮದ ಕೆಂಜಿಲ ನಿವಾಸಿ ರಾಧಮ್ಮ ಎಂಬವರ ಮನೆಗೆ ಇಂದು ಮುಂಜಾನೆ ಸಿಡಿಲು‌ ಬಡಿದು ಮನೆಗೆ ಹಾನಿಯಾಗಿ, ಮನೆಯ ವೈರಿಂಗ್ ಸಂಪೂರ್ಣ ಉರಿದುಹೋಗಿದೆ.

ಗ್ರಾಮ‌ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಪಂಚಾಯತ್ ಸದಸ್ಯರಾದ ತುಳಸಿ ಪೂಜಾರಿ,  ಶೇಖರ ಪೂಜಾರಿ, ಸುಧಾಕರ ಕೆ.ಟಿ., ಗ್ರಾಮ ಕರಣೀಕರಾದ ತೌಫೀಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News