ವಿಟ್ಲದಲ್ಲಿ ದಾವತ್ ಎ ರಮದಾನ್

Update: 2019-05-20 15:21 GMT

ವಿ.ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ವಿಟ್ಲದ ವಿ.ಎಚ್.ಕಾಂಪ್ಲೆಕ್ಸ್ ನಲ್ಲಿ ದಾವತ್ ಎ ರಮದಾನ್ ಕಾರ್ಯಕ್ರಮವು ಸೋಮವಾರ ನಡೆಯಿತು.

ವಿಟ್ಲದಲ್ಲಿ ಪ್ರಪ್ರಥಮವಾಗಿ ಆರಂಭಿಸಿದ ಸಾರ್ವಜನಿಕ ಇಫ್ತಾರ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ದೊರಕಿದ್ದು, ನಾಡಿನ ಸೌಹಾರ್ದತೆ, ಏಕತೆ ಹಾಗೂ ಸಮುದಾಯದ ಸಬಲೀಕರಣಕ್ಕೆ ಯುವಕರ ತಂಡ ದಾವತ್ ಎ ರಮದಾನ್ ಮೂಲಕ ಮುನ್ನುಡಿ ಬರೆದಿದ್ದಾರೆ. ಇದು ಹೀಗೇ ಮುಂದುವರಿದು ಪರಿಸರದ ಅಶಕ್ತರ ಧ್ವನಿಯಾಗಿ ಸಂಘಟನೆ ಬೆಳೆಯಲಿ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಶುಭ ಹಾರೈಸಿದರು.

ಮಾಲಿಕುದ್ದೀನಾರ್ ಸಂಸ್ಥೆಯ ವಿದ್ಯಾರ್ಥಿ ನೌಫಾಲ್ ಕಡಂಬು ರಂಝಾನ್ ಸಂದೇಶ ನೀಡಿ ಪವಿತ್ರ ತಿಂಗಳ ಮಹತ್ವವನ್ನು ವಿವರಿಸಿದರು. ವಿಟ್ಲ ಹೊರಿಝೋನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ವಿ.ಎಚ್. ಅಶ್ರಫ್, ಸಂಘಟಕರಾದ ಶಾಕಿರ್ ಅಳಕೆಮಜಲು, ಉಬೈದ್ ವಿಟ್ಲ ಬಝಾರ್, ಕಲಂದರ್ ಪರ್ತಿಪ್ಪಾಡಿ, ಪತ್ರಕರ್ತ ಮಹಮ್ಮದಲಿ, ಅದ್ದು ದೀಪಕ್, ಇಸಾಕ್ ಏರೋ, ಅಶ್ಫಾಕ್ ಮೇಗಿನಪೇಟೆ, ಅಬೂಬಕರ್ ಅನಿಲಕಟ್ಟೆ, ಅಝೀಝ್ ಕಡಂಬು, ಇಕ್ಬಾಲ್ ಶೀತಲ್, ಉಮರ್ ಎಡ್ವಕೇಟ್, ಹಾರಿಸ್ ಕೊಡಂಗಾಯಿ ಮೊದಲಾದವರು ಉಪಸ್ಥಿತರಿದ್ದರು. ಶಾಕಿರ್ ಅಳಕೆಮಜಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News