ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರನಿಗೆ ಸೋಲು
Update: 2019-05-23 17:14 GMT
ಜೋಧ್ಪುರ, ಮೇ.23: ರಾಜಸ್ಥಾನದಲ್ಲಿ ಬಿಜೆಪಿಯ ನಾಗಲೋಟಕ್ಕೆ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಕೂಡಾ ಸೋಲುನುಭವಿಸಿದ್ಧಾರೆ.ಜೋಧಪುರ ಲೋಕಸಭಾ ಕ್ಷೇತ್ರದಲ್ಲಿ ವೈಭವ್ ಬಿಜೆಪಿಯ ಗಜೇಂದ್ರ ಸಿಂಗ್ ಶೆಖಾವತ್ ಎದುರು 2,74,440 ಮತಗಳ ಬೃಹತ್ ಅಂತರದಿಂದ ಪರಾಭವಗೊಂಡಿದ್ದಾರೆ.
ತನ್ನ ಪುತ್ರನೇ ಸ್ಪರ್ಧಿಸುತ್ತಿದ್ದ ಕಾರಣ ಜೋಧ್ಪುರ ಕ್ಷೇತ್ರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು ಮತ್ತು ಹಾಗಾಗಿ ಅವರು ಈ ಕ್ಷೇತ್ರದಲ್ಲಿ ಹಗಲು ರಾತ್ರಿಯೆನ್ನದೆ ಪ್ರಚಾರ ನಡೆಸಿದ್ದರು. ಅಶೋಕ್ ಗೆಹ್ಲೋಟ್ ಜೋಧ್ಪುರ ಲೋಕಸಭಾ ಕ್ಷೇತ್ರವನ್ನು 1980ರಿಂದ 1999ರವರೆಗೆ ಐದು ಬಾರಿ ಪ್ರತಿನಿಧಿಸಿದ್ದರು.
ಬಿಜೆಪಿ ಮತ್ತು ಸಂಘ ಪರಿವಾರದ ಉನ್ನತ ಪಟ್ಟದ ನಾಯಕರ ಜೊತೆ ಸಾಮಿಪ್ಯ ಹೊಂದಿರುವ ಗಜೇಂದ್ರ ಸಿಂಗ್ ಈ ಚುನಾವಣೆಯಲ್ಲಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನೇ ನೆಚ್ಚಿಕೊಂಡಿದ್ದರು.