ಸಹಕಾರಿ ಧುರೀಣ ಬಾಲಕೃಷ್ಣ ವೋರ್ಕೊಡ್ಲು ನಿಧನ

Update: 2019-05-24 05:34 GMT

ಕಾಸರಗೋಡು, ಮೇ 24: ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯ, ಸಹಕಾರಿ ಧುರೀಣ ಬಾಲಕೃಷ್ಣ ವೋರ್ಕೊಡ್ಲು ಇಂದು ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ  ವಯಸ್ಸಾಗಿತ್ತು.

ಎಡನೀರು ವೋರ್ಕೊಡ್ಲು ನಿವಾಸಿಯಾಗಿದ್ದ ಬಾಲಕೃಷ್ಣರವರು ಜಿಲ್ಲಾ ಬ್ಯಾಂಕ್ ಅಧ್ಯಕ್ಷ, ರಾಜ್ಯ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News