ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ: ಪತ್ರಿಕೆ ವಿತರಕ ಯುವಕ ಮೃತ್ಯು

Update: 2019-05-27 06:03 GMT

ಕಾಸರಗೋಡು, ಮೇ 27: ಬೈಕ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಬೇಕಲ ಸಮೀಪದ ಕುನಿಯ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪನಯಾಲ್ ನಿವಾಸಿ ರತೀಶ್ (26) ಎಂದು ಗುರುತಿಸಲಾಗಿದೆ. ಪತ್ರಿಕೆ ವಿತರಕರಾಗಿದ್ದ ರತೀಶ್ ಇಂದು ಬೆಳಗ್ಗೆ ಪತ್ರಿಕೆ ವಿತರಿಸಲು ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ರತೀಶ್ ನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News