ಕಾರಿನೊಳಗೆ ಉಸಿರುಗಟ್ಟಿ ಬಾಲಕ ಸಾವು

Update: 2019-05-28 17:50 GMT

ಪಶ್ಚಿಮಗೋದಾವರಿ, ಮೇ 28: ಏಳು ವರ್ಷದ ಬಾಲಕನೋರ್ವ ಕಾರಿನ ಒಳಗೆ ಉಸಿರುಗಟ್ಟಿ ಮೃತಪಟ್ಟ ಘಟನೆ ಇಲ್ಲಿನ ದೊಮ್ಮೆರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಮೃತಪಟ್ಟ ಬಾಲಕನನ್ನು ಸಾಯಿಬಾಬಾ ಎಂದು ಗುರುತಿಸಲಾಗಿದೆ.

 ಬಾಲಕ ಮನೆಯ ಹೊರಭಾಗದಲ್ಲಿ ಆಟವಾಡುತ್ತಾ ಸಮೀಪ ನಿಲ್ಲಿಸಿದ ಕಾರಿನ ಒಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಂಡಿದ್ದ. ಕಾರಿನ ಕಿಟಕಿಗಳು ಬಂದ್ ಆಗಿದ್ದುದರಿಂದ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಕೊವ್ವೆರು ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಷ್ಣುವರ್ಧನ್ ತಿಳಿಸಿದ್ದಾರೆ. ಬಾಲಕನಿಗಾಗಿ ಮನೆಯವರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ನಾಲ್ಕು ಗಂಟೆಗಳ ಹುಡುಕಾಟದ ಬಳಿಕ ಮನೆಯವರು ಬಾಲಕನನ್ನು ಕಾರಿನ ಒಳಗಡೆ ಪ್ರಜ್ಞೆ ರಹಿತ ಸ್ಥಿತಿಯಲ್ಲಿ ಪತ್ತೆ ಮಾಡಿದ್ದರು.

 ಕೂಡಲೇ ಕುಟುಂಬದವರು ಬಾಲಕನನ್ನು ಕೊವ್ವೆರುನಲ್ಲಿರುವ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ, ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News