'ಹೂಗುಚ್ಛ, ಶಾಲುಗಳ ಬದಲು ಪುಸ್ತಕಗಳನ್ನು ನೀಡಿ': ಬಿಜೆಪಿ ಸಂಸದನ ನಡೆಗೆ ವ್ಯಾಪಕ ಪ್ರಶಂಸೆ

Update: 2019-05-29 17:24 GMT

ಸಿಕಂದರಾಬಾದ್, ಮೇ 29: ತನಗೆ ಶುಭ ಹಾರೈಸಲು ಕಚೇರಿಗೆ ಆಗಮಿಸುವವರು ಹೂಗುಚ್ಛ, ಶಾಲುಗಳ ಬದಲು ಪುಸ್ತಕಗಳನ್ನು ನೀಡಿ, ಅದನ್ನು ಬಡ ಮಕ್ಕಳಿಗೆ ತಲುಪಿಸುತ್ತೇನೆ ಎಂದು ಹೇಳುವ ಮೂಲಕ ತೆಲಂಗಾಣದ ಸಿಕಂದರಾಬಾದ್ ನ ಬಿಜೆಪಿ ಸಂಸದರೊಬ್ಬರು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇವರ ಹೆಸರು ಕಿಶನ್ ರೆಡ್ಡಿ, ಸಿಕಂದರಾಬಾದ್ ಕ್ಷೇತ್ರದಲ್ಲಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದರು. ತನ್ನ ವಿಜಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು ಈ ವಿಶೇಷ ಬೇಡಿಕೆಯನ್ನು ಹಿತೈಷಿಗಳ ಮುಂದಿಟ್ಟಿದ್ದಾರೆ.

ಇದೀಗ ನೂತನ ಸಂಸದರ ಕಚೇರಿಗೆ ಜನರು ಪುಸ್ತಕಗಳೊಂದಿಗೆ ಆಗಮಿಸುತ್ತಿದ್ದಾರೆ. ಈಗಾಗಲೇ ರಾಶಿರಾಶಿ ಪುಸ್ತಕಗಳು ಅವರ ಕಚೇರಿ ತಲುಪಿವೆ. ಈ ಎಲ್ಲಾ ಪುಸ್ತಕಗಳನ್ನು ರಾಜ್ಯದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

ಕಿಶನ್ ರೆಡ್ಡಿಯವರ ಈ ನಡೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದು, ಪ್ರತಿಯೊಬ್ಬರು ಇದನ್ನು ಅನುಸರಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News