ಮೋದಿ ಸರಕಾರದಲ್ಲಿ ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ

Update: 2019-05-30 09:00 GMT

ಹೊಸದಿಲ್ಲಿ, ಮೇ 30: ಕೇಂದ್ರ ಸಚಿವ ಸಂಪುಟದಲ್ಲಿ ಮಾಜಿ ಸಚಿವರಾದ  ಡಿ.ವಿ.ಸದಾನಂದ ಗೌಡ ಮತ್ತು ನಿರ್ಮಲಾ ಸೀತಾರಾಮನ್, ಧಾರವಾಡದ ಸಂಸದ   ಪ್ರಹ್ಲಾದ ಜೋಶಿ  ಮತ್ತು ಬೆಳಗಾವಿ ಸಂಸದ ಸುರೇಶ್ ಅಂಗಡಿಗೆ  ಸಚಿವ ಸ್ಥಾನ ಖಚಿತವಾಗಿದೆ. 

ಡಿ.ವಿ.ಸದಾನಂದ ಗೌಡ,ನಿರ್ಮಲಾ ಸೀತಾರಾಮನ್ ,  ಪ್ರಹ್ಲಾದ ಜೋಶಿ  ಮತ್ತು   ಸುರೇಶ್ ಅಂಗಡಿ ರಾತ್ರಿ 7 ಗಂಟೆಗೆ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೊದಲ ಬಾರಿ ರಾಜ್ಯದ ಮೂವರು ಸಂಸದರು ಮತ್ತು ರಾಜ್ಯ ಸಭಾ ಸದಸ್ಯರೊಬ್ಬರಿಗೆ  ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವಂತಾಗಿದೆ.
ಡಿ.ವಿ.ಸದಾನಂದ ಗೌಡ,ನಿರ್ಮಲಾ ಸೀತಾರಾಮನ್ ,  ಪ್ರಹ್ಲಾದ ಜೋಶಿ  ಮತ್ತು   ಸುರೇಶ್ ಅಂಗಡಿ ಅವರಿಗೆ  ಪ್ರಮಾಣ ವಚನ ಉದ್ದೇಶಕ್ಕಾಗಿ ಸಂಜೆ 5 ಗಂಟೆಗೆ ಪ್ರಧಾನಿ ನಿವಾಸಕ್ಕೆ ಆಗಮಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 ರಾಜ್ಯದ ಬಿಜೆಪಿಯ ಒಟ್ಟು 25  ಸಂಸದರ ಪೈಕಿ  ಸದಾನಂದ ಗೌಡ , ಪ್ರಹ್ಲಾದ ಜೋಶಿ, ಸುರೇಶ್ ಅಂಗಡಿ ಮೊದಲ ಸಂಪುಟದಲ್ಲಿ   ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್  ಅವರಿಗೂ ಸಚಿವ ಸ್ಥಾನ ದೊರೆಯುವುದರೊಂದಿಗೆ ರಾಜ್ಯದಿಂದ ಒಟ್ಟು ನಾಲ್ವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಖಚಿತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News