ನಿಲ್ಲಿಸಿದ್ದ ಕಾರಿಗೆ ಇನ್ನೊಂದು ಕಾರು ಢಿಕ್ಕಿ: ಓರ್ವ ಯುವಕ ಮೃತ್ಯು; ನಾಲ್ವರಿಗೆ ಗಾಯ

Update: 2019-06-01 04:51 GMT

ಕಾಸರಗೋಡು, ಜೂ.1: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಂದು ಮುಂಜಾನೆ 1:30ರ ಸುಮಾರಿಗೆ ಪಳ್ಳಿಕರೆ ಪೂಚಕ್ಕಾಡ್  ಎಂಬಲ್ಲಿ ನಡೆದಿದೆ.

ಮೃತರನ್ನು ಚೆರ್ಕಳ ಐದನೇ ಮೈಲ್ ನಿವಾಸಿ  ಅಜ್ಮಲ್(21) ಎಂದು  ಗುರುತಿಸಲಾಗಿದೆ. ಕಾರಲ್ಲಿದ್ದ ರಾಶಿದ್, ಅಮಾನುಲ್ಲಾ, ಜುರೈದ್, ಸಹಾದ್  ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಜ್ಮಲ್ ಚಲಾಯಿಸುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು  ಮಗುಚಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ ಬೇಕಲ ಠಾಣಾ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News