ಮಂಗಳೂರು: ಕೈ, ಕುತ್ತಿಗೆ ಹಗ್ಗದಿಂದ ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Update: 2019-06-07 10:49 GMT

ಮಂಗಳೂರು, ಜೂ.7: ಬಟ್ಟೆಗಳಿಂದ ಕೈಗಳನ್ನು ಕಟ್ಟಿದ, ಕುತ್ತಿಗೆಗೆ ಬಟ್ಟೆಯ ಹಗ್ಗದಿಂದ ಬಿಗಿದ ಹಾಗೂ ಹೊಟ್ಟೆ ಭಾಗದಲ್ಲಿ ಇರಿತದ ಗಾಯವನ್ನೊಳಗೊಂಡ ವ್ಯಕ್ತಿಯೋರ್ವನ ಮೃತದೇಹವು ನಗರದ ಟಿಪ್ಪುನಗರ ಸಮೀಪದ ಗುರುಪುರ ಫಲ್ಗುಣಿ ನದಿಯಲ್ಲಿಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಕುದ್ರೋಳಿಯ ಟಿಪ್ಪು ನಗರದ ಬಳಿಯ ನದಿ ತಟದಲ್ಲಿ ಈ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 35ರಿಂದ 40 ವರ್ಷ ವಯಸ್ಸಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಮೂರು, ನಾಲ್ಕು ದಿನಗಳ ಹಿಂದೆ ಈ ಸಾವು ಸಂಭವಿಸಿರುವ ಸಾಧ್ಯತೆಯಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News