ಕಿರಿಯ ಎಂಜಿನಿಯರ್‌ಗೆ ಬಸ್ಕಿ ಹೊಡೆಯಲು ಬಲವಂತ: ಬಿಜೆಡಿ ಶಾಸಕನ ವಿರುದ್ಧ ದೂರು ದಾಖಲು

Update: 2019-06-07 17:18 GMT

ಭುವನೇಶ್ವರ, ಜೂ. 7: ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಯುವಂತೆ ಬಲವಂತ ಮಾಡಿದ ಆರೋಪದಲ್ಲಿ ಬಿಜೆಡಿ ಶಾಸಕ ಸರೋಜ್ ಕುಮಾರ್ ಮೆಹರ್ ವಿರುದ್ಧ ಒಡಿಶಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಯುವಂತೆ ಬಲವಂತಪಡಿಸಿದ ವೀಡಿಯೊ ವೈರಲ್ ಆದ ಬಳಿಕ ಈ ಬಗ್ಗೆ ಮೆಹರ್ ಗುರುವಾರ ಕ್ಷಮೆ ಕೋರಿದ್ದಾರೆ ಹಾಗೂ ಸಾರ್ವಜನಿಕರ ಕೋಪ ಶಮನಗೊಳಿಸಲು ಈ ರೀತಿ ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಬುಧವಾರ ಎಂಜಿನಿಯರ್ ಅವರ ಪತ್ನಿ ಪಟಾನ್‌ಗಢಕ್ಕೆ ನೂತನವಾಗಿ ಆಯ್ಕೆಯಾಗಿರುವ ಶಾಸಕ ಮೆಹರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ನನ್ನ ಪತಿಯನ್ನು ಮನೆಯಿಂದ ಕರೆದು ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ‘‘ಸೂಕ್ತ ಪರಿಶೀಲನೆ ಬಳಿಕ ನಾವು ಪ್ರತಾಪ್‌ಗಢ ಪೊಲೀಸ್ ಠಾಣೆಯಲ್ಲಿ ಶಾಸಕ ಮೆಹರ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಪ್ರತಾಪ್‌ಗಢದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸುರೇಶ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News