ಕೆಮ್ಮಾರ: ಗಿಡ ನೆಟ್ಟು ಮುಂಗಾರನ್ನು ಸ್ವಾಗತಿಸಿದ ಯುವಕರು

Update: 2019-06-11 18:02 GMT

ಉಪ್ಪಿನಂಗಡಿ, ಜೂ.11: ಆಧುನಿಕ ಯುಗದಲ್ಲಿ ಪರಿಸರ ಸಂರಕ್ಷಣೆಯಿಂದ ವಿಮುಖವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಪರಿಸರ ರಕ್ಷಣೆಗಾಗಿ ಕೆಮ್ಮಾರದ ಯುವಕರು ಕೆಮ್ಮಾರ ಹಫ್ವಾ ಜನರಲ್ ಸ್ಟೋರ್ ಎದುರುಗಡೆ ಗಿಡ ನೆಡುವ ಮೂಲಕ ಮುಂಗಾರನ್ನು ಸ್ವಾಗತಿಸಿದರು.

ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಿ.ಕೆ.  ಅತಾವುಲ್ಲಾ ಕೆ.ಪಿ.  ಕಾರ್ಯದರ್ಶಿ ಅಬ್ದುಲ್ ಹಕೀಂ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News