ಮುಕ್ಕದಲ್ಲಿ ರಸ್ತೆ ಅಪಘಾತ: ಮುಲ್ಕಿಯ ಯುವಕ ಸಾವು
ಮುಲ್ಕಿ: ಮುಕ್ಕ ಬಸ್ಸು ನಿಲ್ದಾಣದ ಬಳಿಯಲ್ಲಿ ತೂಫಾನ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಚರ್ವೋಲೆಟ್ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಮನೆಯೊಳಗೆ ನುಗ್ಗಿ ಅಪಘಾತ ಸಂಭವಿಸಿ ತೂಫಾನ್ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತ ರನ್ನು ಮುಲ್ಕಿ ಕೆಎಸ್ ರಾವ್ನಗರ ನಿವಾಸಿ ಮೂಲತ: ಗುಲ್ಬರ್ಗ ಜಿಲ್ಲೆಯ ಅಫ್ಜಲ್ಪುರ ಮಣೂರಿನ ರಾಮು ಯಾನೇ ರಮೇಶ್ (21) ಎಂದು ಗುರುತಿಸಲಾಗಿದೆ.
ಅವರು ಮುಲ್ಕಿಯ ಕೆಎಸ್ ರಾವ್ನಗರದಿಂದ ಸುರತ್ಕಲ್ ಕಡೆಗೆ ತೂಪಾನ್ ವಾಹನದಲ್ಲಿ ಕೆಎಸ್ ರಾವ್ನಗರದ ನಿವಾಸಿಗಳಾದ ಮೋಹನ್ ರಾಜ್(21) ಮತ್ತು ಪರಶುರಾಮ(25) ಜೊತೆಗೆ ಪ್ರಯಾಣಿಸುತ್ತಿದ್ದು ಮುಕ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಹೆದ್ದಾರಿ ಬದಿಯಲ್ಲಿದ್ದ ಮನೆಯೊಳಗೆ ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.