ಬೆಳ್ತಂಗಡಿ: ಬೆಂಕಿ ಅವಘಡಕ್ಕೆ ಅಂಗಡಿ ಭಸ್ಮ

Update: 2019-06-15 04:47 GMT

ಬೆಳ್ತಂಗಡಿ, ಜೂ.15: ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಳೆದ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಂಗಡಿಯೊಂದು ಸಂಪೂರ್ಣ ಭಸ್ಮವಾಗಿದೆ.

ಬಸ್ ನಿಲ್ದಾಣದಲ್ಲಿರುವ ಗುರುನಾರಾಯಣ ವಾಣಿಜ್ಯ ಸಂಕೀರ್ಣದಲ್ಲಿ ಕೇಶವ ಭಂಡಾರಿ ಎಂಬವರ ಮಾಲಕತ್ವದ ಫ್ಯಾನ್ಸಿ ಹಾಗೂ ಸಲೂನ್ ಸಲಕರಣೆ ಮಾರಾಟ ಮಾಡುವ ಅಂಗಡಿ ಬೆಂಕಿ ಅವಘಡಕ್ಕಿ ಸಿಲುಕಿ ಹಾನಿಗೀಡಾಗಿದೆ.

ನಿನ್ನೆ ರಾತ್ರಿ 10:30ರ ಬಳಿಕ ಈ ಅವಘಡ ಸಂಭವಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಸ್ಥಳಕ್ಕೆ ಆಗಮಿಸುವ ವೇಳೆಗೆ ಅಂಗಡಿ ಬಹುತೇಕ ಬೆಂಕಿಗೆ ಆಹುತಿಯಾಗಿತ್ತು. ಬಳಿಕ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಪಸರಿಸದಂತೆ ಅಗ್ನಿಶಾಮಕ ದಳದವರು ಎಚ್ಚರ ವಹಿಸಿ ಬೆಂಕಿ ನಂದಿಸಿದರು.

ಬೆಂಕಿ ಅವಘಡಕ್ಕೆ ಸರಿಯಾದ ಮಾಹಿತಿ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News