ಉಡುಪಿ: ಹೊರರೋಗಿ ವಿಭಾಗದ ಸೇವೆ ಬಂದ್

Update: 2019-06-15 12:26 GMT

ಉಡುಪಿ, ಜೂ.15: ಇತ್ತೀಚೆಗೆ ಯುವ ವೈದ್ಯರ ಮೇಲೆ ನಡೆದ ತೀವ್ರತರ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಜೂ.17ರಂದು ರಾಷ್ಟ್ರ ವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿದ್ದು, ಈ ಪ್ರಯುಕ್ತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆ ಹಾಗೂ ಕಾರ್ಕಳ ಡಾ.ಟಿಎಂಎ ಪೈ ಆಸ್ಪತ್ರೆಯ ಹೊರರೋಗಿ ವಿಭಾಗದ ಸೌಲಭ್ಯವು ಜೂ.17ರಂದು ಬೆಳಿಗ್ಗೆ 6ರಿಂದ ಜೂ.18ರ ಬೆಳಿಗ್ಗೆ 6ರವರೆಗೆ ಬಂದ್ ಮಾಡಲಾಗುತ್ತದೆ.

ಆದರೆ ತುರ್ತುಚಿಕಿತ್ಸೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News