ಜೂ.28ರಂದು ‘ಸಮಯದ ಹಿಂದೆ ಸವಾರಿ’ ಚಿತ್ರಬಿಡುಗಡೆ

Update: 2019-06-15 12:28 GMT

ಉಡುಪಿ, ಜೂ.15: ಬಂಟ್ಸ್ ಲಯನ್ ಫಿಲ್ಮ್ ಇಂಟರ್‌ನ್ಯಾಷನಲ್ ಸಂಸ್ಥೆ ವತಿಯಿಂದ ನಿರ್ಮಿಸಲಾದ ‘ಸಮಯದ ಹಿಂದೆ ಸವಾರಿ’ ಚಲನಚಿತ್ರ ಜೂ.28 ರಂದು ಬೆಂಗಳೂರು, ಮಂಗಳೂರು, ಉಡುಪಿ ರಾಜ್ಯದ್ಯಂತ ಬಿಡುಗಡೆ ಯಾಗಲಿದೆ ಎಂದು ಚಿತ್ರದ ನಿರ್ದೇಶಕ ರಾಜ್‌ಗುರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಖಕ, ಪತ್ರಕರ್ತ ಜೋಗಿ ಅವರ ಕಾದಂಬರಿಯಾಧಾರಿತ ಸಿನೆಮಾ ಇದಾ ಗಿದ್ದು, ಈಗಾಗಲೇ ಈ ಕಾದಂಬರಿ ಆಧರಿಸಿ ‘ಬಲ್ಲಮೂಲಗಳ ಪ್ರಕಾರ’ ಎಂಬ ನಾಟಕ ಮಾಡಲಾಗಿದೆ ಎಂದರು.

ನಟ, ನಿರ್ಮಾಪಕ ರಾಹುಲ್ ಹೆಗ್ಡೆ ಮಾತನಾಡಿ, ರಾಜಕೀಯ ಬೆಳವಣಿಗೆ, ಹಾಸ್ಯ, ನಿಗೂಢತೆ ಎಲ್ಲದರ ಮಿಶ್ರಣವನ್ನು ಸಿನಿಮಾ ಒಳಗೊಂಡಿದೆ. ಕರಾವಳಿ ಯ ಸೊಗಡನ್ನು ಇದರಲ್ಲಿ ಮನೋಜ್ಞವಾಗಿ ಚಿತ್ರೀಕರಿಸಲಾಗಿದೆ. ಕುಂದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ ಎಂದರು. ಚಿತ್ರಕ್ಕೆ ಸುನಿಲ್ ಹಲಗೇರಿ ಛಾಯಾಗ್ರಹಣ, ಭೂಪೇಶ್ ಬೆಳಗಲಿ ಬೆಳಕು, ನಯನಾ ಜೆ.ಸೂಡ ವಸ್ತ್ರ ವಿನ್ಯಾಸ, ಮಲ್ಲೇಶ್ ಮೇಕಪ್, ಡಿಟಿಎಸ್ ಹಾಗೂ ಎಸ್.ಎಫ್.ಎಕ್ಸ್ ಶಂಕರ್ ಒದಗಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಯನಾ ಜೆ.ಸೂಡ, ಪ್ರವೀಣ್, ರಂಜಿತ್ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News