​ಗಾಳಿಮಳೆ: ಮನೆ, ಶಾಲೆಗಳಿಗೆ ಅಪಾರ ಹಾನಿ

Update: 2019-06-15 15:29 GMT

ಕುಂದಾಪುರ, ಜೂ.15: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದ ಕುಂದಾಪುರ ತಾಲೂಕಿನಾದ್ಯಂತ ಮನೆ ಶಾಲೆಗಳಿಗೆ ಹಾನಿ ಸಂಭವಿಸಿ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಗಾಳಿ ಮಳೆಯಿಂದ ಬೀಜಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಪಡು-ಬೀಜಾಡಿ)ಗೆ ಭಾಗಶಃ ಹಾನಿಯಾಗಿದ್ದು, ಸುಮಾರು 25,000ರೂ. ನಷ್ಟ ಅಂದಾಜಿಸಲಾಗಿದೆ. ಕೋಟೇಶ್ವರ ಗ್ರಾಮದ ರಾಧಾ, ಸಣ್ಣಮ್ಮ ಹಾಗೂ ಸೀತಮ್ಮ ಎಂಬವರ ವಾಸ್ತವ್ಯದ ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ತಲಾ 50,000ರೂ. ನಷ್ಟ ಉಂಟಾಗಿದೆ.

ಕುಂದಾಪುರ ತಾಲೂಕಿನ ಕಟ್ಟಬೆಲ್ತೂರು ಗ್ರಾಮದ ಸುರೇಶ ಎಂಬವರ ಮನೆಗೆ ಭಾಗಶಃ ಹಾನಿಯಾಗಿ ಸುಮಾರು26,000ರೂ. ಮತ್ತು ಉಡುಪಿ ತಾಲೂಕಿನ ಪಡುತೊನ್ಸೆ ಗ್ರಾಮದ ಪಾರ್ವತಿ ಎಂಬವರ ಪಕ್ಕಾ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದ್ದು, ಸುಮಾರು 40,000 ರೂ. ನಷ್ಟವಾಗಿರುವ ಬಗ್ಗೆ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News