ನೀರಿನ ಮೂಲ ಬಳಕೆಗೆ ಯೋಜನೆ ರೂಪಿಸಿ: ರಘುಪತಿ ಭಟ್

Update: 2019-06-15 15:33 GMT

ಉಡುಪಿ, ಜೂ.15: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದು, ಈ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಶನ್‌ನ ಸಮಿತಿ ಸೆಯಲ್ಲಿ ಅವರು ಮಾತನಾಡುತಿದ್ದರು.

ಪ್ರಸ್ತುತ ಉಡುಪಿಗೆ ಬಜೆ ಡ್ಯಾಮ್‌ನಲ್ಲಿನ ನೀರನ್ನು ಶುದ್ದೀಕರಿಸಿ ಪೂರೈಸ ಲಾಗುತ್ತಿದ್ದು, ಮುಂದೆ ಭರತ್ಕಲ್‌ನಲ್ಲಿ ನೀರನ್ನು ಟ್ರೀಟೆಡ್ ಮಾಡಿ, ಉಡುಪಿ ಕ್ಷೇತ್ರಕ್ಕೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಉಡುಪಿ ಕ್ಷೇತ್ರದ ಎಲ್ಲಾ ಗ್ರಾಪಂಗಳಿಗೆ 24 ಗಂಟೆಗಳ ಕಾಲವೂ ನೀರು ಪೂರೈಕೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು

ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಕ್ರಿಯಾ ಯೋಜನೆಯಡಿಯಲ್ಲಿ 2019-20ನೇ ಸಾಲಿನ ಪ್ರತೀ ತಾಲೂಕಿಗೆ ಸೂಚಿಸಲಾಗಿರುವ ಮೊತ್ತಕ್ಕೆ ಅನು ಗುಣವಾಗಿ ಯೋಜನೆಗಳ ಪ್ರಸ್ತಾವನೆಯನ್ನು ತಯಾರಿಸಿ ಈ ತಿಂಗಳ 18ರೊಳಗೆ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅಧಿಕಾರಿಗಳಿಗೆ ಸೂಚಿಸಿದರು.

ನೈರ್ಮಲ್ಯ ಮಿಶನ್‌ನ ಯೋಜನೆಯಡಿಯಲ್ಲಿ ಶೌಚಾಲಯ ನಿಮಾಣಕ್ಕೆ 640 ಗುರಿ ನೀಡಲಾಗಿದ್ದು ಈ ಪೈಕಿ 403 ಪೂರ್ಣಗೊಂಡಿದೆ. 169 ಕಾಮ ಗಾರಿಗಳು ಬಾಕಿ ಉಳಿದಿವೆ. ಘನ ದ್ರವ ತ್ಯಾಜ್ಯ ನಿರ್ವಹಣೆಗೆ ಪಂಚಾಯತ್ ವಾರು ಒಟ್ಟು 40 ಗ್ರಾಪಂಗಳಿಗೆ ಅನುಮೋದನೆ ನೀಡಲಾಗಿದ್ದು ಈ ಪೈಕಿ 14 ಘಟಕಗಳು ಪೂರ್ಣಗೊಂಡಿವೆ. 17 ಘಟಕಗಳು ಪ್ರಗತಿಯ ಹಂತದಲ್ಲಿದೆ. 9 ಗ್ರಾಪಂಗಳಲ್ಲಿ ಹಲವು ಕಾರಣಗಳಿಂದ ಇನ್ನೂ ಕಾರ್ಯಾರಂಭವಾಗಬೇಕಿದೆ. ಬಾಕಿ ಇರುವ ಯೋಜನೆಗಳಿಗೆ ಸರಿಯಾದ ಪ್ರಸ್ತಾವನೆ ಸಲ್ಲಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News