ಫರಂಗಿಪೇಟೆ: ಪಿಎಪ್ಐ ವತಿಯಿಂದ ಈದ್ ಮಿಲನ್ ಸ್ಪೋಟ್ಸ್

Update: 2019-06-17 05:22 GMT

ಫರಂಗಿಪೇಟೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ಡಿವಿಷನ್ ವತಿಯಿಂದ ರವಿವಾರ ಫರಂಗಿಪೇಟೆಯಲ್ಲಿ ಈದ್ ಮಿಲನ್ ಸ್ಪೋಟ್ಸ್ ಮೀಟ್ ನಡೆಯಿತು.

ಕ್ರಿಡಾಳುಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಪ್ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸಲೀಮ್ ಕುಂಪನಮಜಲ್ ದೈಹಿಕ ಮತ್ತು  ಮಾನಸಿಕ ಆರೋಗ್ಯಕ್ಕಾಗಿ ದಿನನಿತ್ಯ ವ್ಯಯಾಮ, ತರಬೇತು ಅಗತ್ಯವಿದೆ ಎಂದು ಹೇಳಿದ ಅವರು ಆರೋಗ್ಯವಂತ ಜನರಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ  ಎಂದರು.

ಅತಿಥಿಗಳಾಗಿ ಪಿಎಫ್ಐ ಫರಂಗಿಪೇಟೆ ಡಿವಿಷನ್ ಅಧ್ಯಕ್ಷ ನಿಸಾರ್ ವಳವೂರು, ಫರಂಗಿಪೇಟೆ ಏರಿಯ ಅಧ್ಯಕ್ಷ ನಝೀರ್ ಕುಂಜತ್ಕಳ, ತುಂಬೆ ಏರಿಯ ಅಧ್ಯಕ್ಷ ಸಿರಾಜ್, ಅರ್ಕುಳ ಏರಿಯಾ ಅಧ್ಯಕ್ಷ ರಶೀದ್ ಅರ್ಕುಳ, ಎಸ್ಡಿಪಿಐ ಮುಖಂಡ ಸುಲೈಮಾನ್ ಉಸ್ತಾದ್, ತಂಬೆ ಗ್ರಾಮ ಸಮಿತಿ ಅಧ್ಯಕ್ಷ ಅಝೀಝ್ ತುಂಬೆ, ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಮುಬಾರಕ್ ಕುಪನಮಜಲ್ ನೇತೃತ್ವದ ತಂಡ ಚಾಂಪಿಯನ್ನಾಗಿ ಪ್ರಶಸ್ತಿ ಪಡೆದರೆ ರನ್ನರ್ ಅಫ್ ಪ್ರಶಸ್ತಿಯನ್ನು ಅಶ್ರಫ್ ಅಮೆಮಾರ್ ತಂಡ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News