ಸುನ್ನತ್ ಕೆರೆ: ಬುಸ್ತಾನುಲ್ ಉಲೂಮ್ ಮದರಸ ಆರಂಭೋತ್ಸವ

Update: 2019-06-17 07:16 GMT

ಸುನ್ನತ್ ಕೆರೆ: ಅಲ್ ಮಸ್ಜಿದುಲ್ ಹುದಾ ಜುಮಾ ಮಸೀದಿ ಸುನ್ನತ್ ಕೆರೆ  ಇದರ ಬುಸ್ತಾನುಲ್ ಉಲೂಮ್ ಮದರಸ ಸುನ್ನತ್ ಕೆರೆ  ಪ್ರಾರಂಭೋತ್ಸವ "ಫಥುಹೇ ಮುಬಾರಕ್ " ಕಾರ್ಯಕ್ರಮವು ಮದರಸ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನತ್ ಕೆರೆ ಮಸೀದಿಯ ಖತೀಬ್ ಕರೀಂ ಸಅದಿ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಮಸೀದಿಯ ಅಧ್ಯಕ್ಷ ಅಶ್ರಫ್ ಬಿಲ್ಡಿಂಗ್ ಕಾಂಟ್ರಾಕ್ಟರ್ ವಹಿಸಿದ್ದರು. ಮದರಸ ಮುಖ್ಯ ಅಧ್ಯಾಪಕ ಅಶ್ರಫ್ ಮುಸ್ಲಿಯಾರ್ ಸ್ವಾಗತಿಸಿ, ಪ್ರಾಧ್ಯಾಪಕ  ಅಬ್ದುರಹ್ಮಾನ್  ಸಖಾಫಿ ದುಆ ಆಶಿರ್ವಚನ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರೀಂ ಸಅದಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ  ಹೆತ್ತವರ ಪಾತ್ರ ಅತೀ ಮುಖ್ಯ. ಅದೆಲ್ಲ ಪೋಷಕರ ಜವಾಬ್ದಾರಿ  ಆಗಿದೆ. ಕಲಿತ ವಿದ್ಯೆಯನ್ನು ಜೀವನದಲ್ಲಿ ಅನುಸರಿಸಿಕೊಂಡು ಹೋಗುವುದರಲ್ಲಿ ಹೆತ್ತವರ ಮಾರ್ಗದರ್ಶನ ಅತ್ಯಗತ್ಯ ಎಂದು ಹೇಳಿದರು. ನಂತರ ಮಸೀದಿ ಅಧ್ಯಕ್ಷರ ಸಮ್ಮುಖದಲಿ ಒಂದನೇ ತರಗತಿಗೆ ದಾಖಲಾತಿ ನಡೆಯಿತು.

ಈ ಸಂದರ್ಭ ಜಮಾತ್ ಕಮಿಟಿ ಉಪಾಧ್ಯಕ್ಷ ಅಬ್ಬಾಸ್ ಹಾಜಿ,  ಹನೀಫ್ ಜಿ.ಎಂ., ಸಮೀರ್ ಪಿ ವಿ ಆರ್, ಅಬ್ದುಲ್ ಬಶೀರ್,  ಮೂಸಾಕ, ಸಾದಿಕ್ ಸಾಹೇಬ್, ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಪದಾಧಿಕಾರಿಗಳಾದ ಶಬೀರ್, ಕಲಂದರ್ ಬಿ.ಎಚ್., ಅಫ್ರಾತ್, ಇಸಾಕ್ ಉಪಸ್ಥಿತರಿದ್ದರು.

ಮದರಸ ಅಧ್ಯಾಪಕ ರಝಾಕ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News