ಸಸಿಹಿತ್ಲು ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಆರ್. ವಿ. ದೇಶಪಾಂಡೆ ಭೇಟಿ, ಪರಿಶೀಲನೆ
Update: 2019-06-18 11:17 GMT
ಮುಲ್ಕಿ, ಜೂ.18: ಕೆಲವು ದಿನಗಳ ಹಿಂದೆ ತೀವ್ರ ಕಡಲ್ಕೊರೆತಕ್ಕೆ ಒಳಗಾಗಿದ್ದ ಸಸಿಹಿತ್ಲು ಬೀಚ್ ಗೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಮಂಗಳವಾರ ಭೇಟಿ ನೀಡಿ, ಕಡಲ್ಕೊರೆತ ಹಾನಿಯನ್ನು ವೀಕ್ಷಿಸಿದರು.
ಸಚಿವ ಯು.ಟಿ. ಖಾದರ್, ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜೊತೆಗಿದ್ದರು.