ಹೃದಯಾಘಾತ: ಭಟ್ ನರ್ಸಿಂಗ್‌ ಹೋಂ ವೈದ್ಯ ರಾಜೇಶ್ ಭಟ್ ನಿಧನ

Update: 2019-06-22 09:32 GMT

ಮಂಗಳೂರು, ಜೂ. 22: ನಗರದ ಭಟ್ ನರ್ಸಿಂಗ್‌ ಹೋಂ ವೈದ್ಯ ಮತ್ತು ಆಡಳಿತ ಪಾಲುದಾರರು ಡಾ. ರಾಜೇಶ್ ಭಟ್ (48) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.

ನಗರದ ಮಂಗಳಾ ಒಳಾಂಗಣ ಕ್ರೀಡಾಂಗಣಕ್ಕೆ ಆಗಮಿಸಿದ್ದ ಡಾ. ಭಟ್ ಅಲ್ಲಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದ ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟರೆಂದು ತಿಳಿಸಿರುವುದಾಗಿ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News