ಕೃಷ್ಣಾಪುರ : ‘ಝಹರತುಲ್ ಕುರ್‌ಆನ್’ ಪ್ರಾರಂಭೋತ್ಸವ

Update: 2019-06-24 11:19 GMT

ಸುರತ್ಕಲ್, ಜೂ.24: ಕೃಷ್ಣಾಪುರ 7ನೆ ಬ್ಲಾಕ್‌ನಲ್ಲಿ ‘ಝಹರತುಲ್ ಕುರ್‌ಆನ್’ ಪ್ರಾರಂಭೋತ್ಸವವು ಇತ್ತೀಚೆಗೆ ಜರುಗಿತು.

ಅಲ್‌ಹಾಜ್ ಜಮಲುಲೈಲ್ ತಂಙಳ್ ಕಾಜೂರ್ ಉದ್ಘಾಟಿಸಿ ದುಆಗೈದರು. ಕೃಷ್ಣಾಪುರ ಅಲ್ ಬದ್ರಿಯಾ ಜುಮಾ ಮಸೀದಿಯ ಸಂಯುಕ್ತ ಖಾಝಿ ಅಲ್‌ಹಾಜ್ ಇ.ಕೆ.ಇಬ್ರಾಂ ಮದನಿ, ಮಕ್ಕಳಿಗೆ ‘ಅಲಿಫ್’ ಎಂಬ ಅಕ್ಷರವನ್ನು ಬರೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಫೈಝಲ್ ದಮ್ಮಾಮ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿಗಳಾದ ಮುಹಮ್ಮದ್ ಮುಝ್ಮುಲ್ ಮತ್ತು ಮುಹಮ್ಮದ್ ಮುದ್ದಸ್ಸಿರ್, ಅಸ್ಪಾಕ್ ಜೊಕಟ್ಟೆ ಮತ್ತು ಅಬೂಬಕ್ಕರ್ ಕೋಡಿ, ಪ್ರಾಂಶುಪಾಲ ಅನೀಶ ಫೈಝಲ್, ಅಲ್ ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಸತ್ತಾರ್, ಉತ್ತಹಾಜಿ, ನವ ಮಂಗಳೂರು ಬಂದರಿನ ಟ್ರಸ್ಟಿ ಅಬೂಬಕ್ಕರ್ ಕೃಷ್ಣಾಪುರ, ಮುಹಮ್ಮದ್ ಶಾಫಿ, ಉಂಞ, ಖಾದರ್ ದಮ್ಮಾಮ್, ಬಿ.ಎ.ನಝಿರ್ ಮತ್ತು ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಸಂಚಾಲಕ ಅಬ್ದುಲ್ ಹಮೀದ್ ಎಸ್.ಎಂ. ‘ಝಹರತುಲ್ ಕುರಾನ್’ ಸಾಗಿ ಬಂದ ಹಾದಿಯ ಬಗ್ಗೆ ವಿವರಿಸಿದರು. ಅಲ್ ಬದ್ರಿಯಾ ಕೇಂದ್ರ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ ಶುಭ ಹಾರೈಸಿದರು. 4ನೇ ಬ್ಲಾಕ್ ಮಸೀದಿಯ ಖತೀಬಬ್ ಉಮರುಲ್ ಫಾರೂಕ್ ಅಹ್ಸನಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News