ಕಾರು ಅಪಘಾತ: ಗಾಯಾಳು ಮಹಿಳೆ ಮೃತ್ಯು

Update: 2019-06-24 12:28 GMT

ಕಾಸರಗೋಡು: ಕೆಲ ದಿನಗಳ ಹಿಂದೆ ಮಂಗಳೂರಿನ ಮೇರಿ ಹಿಲ್ ನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಪಡನ್ನಕ್ಕಾಡ್ ನ ಸುಹೈಲ್ ಎಂಬವರ ಪತ್ನಿ ಖೈರುನ್ನಿಸಾ( 25) ಮೃತಪಟ್ಟವರು.

ಜೂನ್ 18 ರಂದು ಘಟನೆ ನಡೆದಿತ್ತು. ಪತಿ ಸುಹೈಲ್ ರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟು ಮರಳುತ್ತಿದ್ದಾಗ ಮೇರಿ ಹಿಲ್ ಬಳಿ ಚಾಲಕನ ನಿಯಂತ್ರನ ತಪ್ಪಿದ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ಖೈರುನ್ನೀಸಾ ಸೇರಿದಂತೆ ಕಾರಲ್ಲಿದ್ದ ನಾಲ್ವರು ಗಾಯಗೊಂಡಿದ್ದರು. ಸುಹೈಲ್ ರ ಸಹೋದರ ಸಮದ್, ತಂದೆ ಅಝೀಝ್, ಸಹೋದರಿ ಸುಮಯ್ಯ ಘಟನೆಯಲ್ಲಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಖೈರುನ್ನೀಸಾ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News