ಜೂ.25: ಸಂಸದ ರಾಘವೇಂದ್ರ ಬೈಂದೂರಿಗೆ

Update: 2019-06-24 18:32 GMT

ಉಡುಪಿ, ಜೂ.24: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ನಾಳೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿ, ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.

ಶಿವಮೊಗ್ಗದಿಂದ ರಸ್ತೆಮಾರ್ಗವಾಗಿ ಬೆಳಗ್ಗೆ 10:00ಗಂಟೆಗೆ ಗಂಗೊಳ್ಳಿಗೆ ಆಗಮಿಸುವ ರಾಘವೇಂದ್ರ ಗಂಗೊಳ್ಳಿ ಬಂದರು, ಜಟ್ಟಿಯನ್ನು ವೀಕ್ಷಿಸಿ, ಸ್ಥಳೀಯರು ಹಾಗೂ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ. 11:00ಕ್ಕೆ ಮರವಂತೆ-ತ್ರಾಸಿ ಎಡಿಬಿ ಕರಾವಳಿ ತೀರ ಸಂರಕ್ಷಣೆ ಕಾಮಗಾರಿ ವೀಕ್ಷಿಸುವರು.

11:30ಕ್ಕೆ ಮರವಂತೆ ಬ್ರೇಕ್‌ವಾಟರ್ ವೀಕ್ಷಿಸಿ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸುವ ಅವರು ಅಪರಾಹ್ನ 12:00ಕ್ಕೆ ಕಿರಿಮಂಜೇಶ್ವರದ ಕೊಡೇರಿ ಬ್ರೇಕ್‌ವಾಟರ್ ಕಾಮಗಾರಿ ವೀಕ್ಷಿಸಲಿದ್ದಾರೆ. 12:30ಕ್ಕೆ ಕಿರಿಮಂಜೇಶ್ವರದ ಅದ್ರಗೋಳಿಗೆ ಭೇಟಿ, 1:00ಕ್ಕೆ ಉಪ್ಪುಂದ ಬಂದರಿಗೆ ಭೇಟಿ, 2:45ಕ್ಕೆ ಬೈಂದೂರು ಐಬಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. 3:00ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಅವರು ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News