ಉಳ್ಳಾಲ ತಾಲೂಕಿಗೆ ನಾಲ್ಕು ಗ್ರಾಮಗಳ ಸೇರ್ಪಡಿಸದಂತೆ ಮನವಿ

Update: 2019-06-25 12:30 GMT

ಮಂಗಳೂರು, ಜೂ.24: ದ.ಕ.ಜಿಲ್ಲೆಯ 9ನೆ ತಾಲೂಕಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಬಂಟ್ವಾಳ ತಾಲೂಕಿನ ಪುದು, ತುಂಬೆ, ಕೊಡ್ಮಣ್, ಮೇರಮಜಲು, ಸಜಿಪ ಗ್ರಾಮಗಳ ಸೇರ್ಪಡೆ ಮಾಡುವುದು ಬೇಡ ಎಂದು ಮಂಗಳೂರು ವಿಭಾಗದ ನಿವೃತ್ತ ಕೆಎಸ್ಸಾರ್ಟಿಸಿ ಯೂನಿಯನ್ ಅಧ್ಯಕ್ಷ ಎಫ್.ಎ. ಖಾದರ್ ಹಾಜಿ ಆಗ್ರಹಿಸಿದ್ದಾರೆ.

ಈ ಗ್ರಾಮದ ಜನತೆಗೆ ಉಳ್ಳಾಲ ತಾಲೂಕು ಬಹುದೂರವಾಗಲಿದೆ. ಸೇರ್ಪಡೆಗೊಂಡರೆ ಮುಂದೆ ಇನ್ನಷ್ಟು ಸಮಸ್ಯೆಯಾಗಲಿದೆ. ಹಾಗಾಗಿ ಜನರಿಗೆ ಸಮಸ್ಯೆಯಾಗುವ, ಹೊರೆಯಾಗುವ ನಿರ್ಧಾರವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೈಬಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News