ರಾಜ್ಯಸಭೆಯಲ್ಲಿ ಮಿರ್ಜಾ ಗಾಲಿಬ್ ಅವರ ದ್ವಿಪದಿಯನ್ನು ತಪ್ಪಾಗಿ ಉಲ್ಲೇಖಿಸಿದ ಮೋದಿ

Update: 2019-06-26 17:51 GMT

ಹೊಸದಿಲ್ಲಿ, ಜೂ.26: ರಾಜ್ಯಸಭೆಯಲ್ಲಿ ಬುಧವಾರ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಝಾದ್ ಅವರನ್ನು ಕುಟುಕುವ ಬರದಲ್ಲಿ ಪ್ರಧಾನಿ ಮೋದಿ ಪ್ರಸಿದ್ಧ ಕವಿ ಮಿರ್ಝಾ ಗಾಲಿಬ್ ಅವರ ದ್ವಿಪದಿಯನ್ನು ತಪ್ಪಾಗಿ ಉಲ್ಲೇಖಿಸಿದ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಆಝಾದ್ ಅವರು ಬಿಜೆಪಿ ಸರಕಾರವನ್ನು ಕುರಿತು ಮಾತನಾಡುತ್ತಾ, ನಿಮ್ಮ ನವ ಭಾರತವನ್ನು ನೀವೇ ಇಟ್ಟುಕೊಳ್ಳಿ, ನಮ್ಮ ಹಳೆಯ ಭಾರತವನ್ನು ನಮಗೆ ನೀಡಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಉತ್ತರವಾಗಿ ಮಿರ್ಝಾ ಗಾಲಿಬ್ ಅವರ ದ್ವಿಪದಿಯನ್ನು ಮೋದಿ ಉಲ್ಲೇಖಿಸಿದ್ದರು; ಜೀವನಪೂರ್ತಿ ಗಾಲಿಬ್ ಆ ತಪ್ಪನ್ನೇ ಮಾಡುತ್ತಿದ್ದ, ಧೂಳು ಆತನ ಮುಖದಲ್ಲಿತ್ತು. ಆದರೆ ಆತ ಕನ್ನಡಿಯನ್ನು ಸ್ವಚ್ಛಗೊಳಿಸುತ್ತಿದ್ದ. ಈ ಕುರಿತು ಟ್ವೀಟ್ ಮಾಡಿದ ಖ್ಯಾತ ಸಾಹಿತಿ ಮತ್ತು ಕವಿ ಜಾವೇದ್ ಅಖ್ತರ್, ಮೋದಿ ಹೇಳಿದ ದ್ವಿಪದಿಯನ್ನು ರಚಿಸಿರುವುದು ಮಿರ್ಝಾ ಗಾಲಿಬ್ ಅಲ್ಲ ಮತ್ತು ಅದರ ಎರಡು ಸಾಲುಗಳು ಸರಿಯಾದ ಕ್ರಮದಲ್ಲಿಲ್ಲ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News