ಕಾಸರಗೋಡು : ಮರದ ತುಂಡಿನಿಂದ ಬಡಿದು ತಂದೆಯನ್ನು ಕೊಂದ ಮಗ

Update: 2019-06-29 09:41 GMT
ದಾಮೋದರ

ಕಾಸರಗೋಡು : ಮರದ ತುಂಡಿನಿಂದ ಬಡಿದು ಮಗ ತಂದೆಯನ್ನು ಕೊಲೆಗೈದ ಘಟನೆ ಚಿತ್ತಾರಿಕಾಲ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 

ಪುದಿಯಕೋಟದ ದಾಮೋದರ (62) ಎಂಬವರ ಕೊಲೆಗೆ ಸಂಬಂಧಪಟ್ಟಂತೆ ಅವರ ಪುತ್ರ ಆನೂಷ್ (25) ಎಂಬಾತನನ್ನು ಪೊಲೀಸರು  ಬಂಧಿಸಿದ್ದಾರೆ. ಕೌಟು೦ಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ದಾಮೋದರ ಮತ್ತು ಆನೂಷ್ ನಡುವೆ ಜಗಳವಾಗಿದ್ದು, ಈ ನಡುವೆ  ಮರದ ತುಂಡಿನಿಂದ ತಂದೆಗೆ     ಬಡಿದಿದ್ದು, ಕುಸಿದು ಬಿದ್ದ ದಾಮೋದರ ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ.

ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಕೊನೆಗೊಂಡಿದೆ. ಕಾಞ೦ಗಾಡ್  ಡಿವೈ ಎಸ್ ಪಿ ಪಿ.ಕೆ.ಸುಧಾಕರನ್ ನೇತೃತ್ವದ ತಂಡವು ಸ್ಥಳಕ್ಕಾಗಮಿಸಿದ್ದು, ಮುಂದಿನ  ಕ್ರಮ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News