ದಲಿತ ಯುವಕನ ವಿವಾಹವಾದ ಪುತ್ರಿಯ ಹತ್ಯೆಗೈದ ಹೆತ್ತವರು

Update: 2019-06-29 16:26 GMT

 ಹೊಸದಿಲ್ಲಿ, ಜೂ. 29: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಸರ್‌ಪೆಂಟಾ ಗ್ರಾಮದಲ್ಲಿ ನಡೆದ ಮಾರ್ಯದೆಗೇಡು ಹತ್ಯೆ ಪ್ರಕರಣವೊಂದರಲ್ಲಿ ಹೆತ್ತವರೇ ತಮ್ಮ ಪುತ್ರಿಯನ್ನು ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ.

ಹೆತ್ತವರ ನಿಲುವಿಗೆ ವಿರುದ್ಧವಾಗಿ 25ರ ಹರೆಯದ ದಲಿತ ಯುವಕ ಕೇಶವಲು ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾದ 23ರ ಯುವತಿ ಹೇಮಾವತಿಯನ್ನು ಆಕೆಯ ಹೆತ್ತವರೇ ಹತ್ಯೆಗೈದಿದ್ದಾರೆ.

ಹೇಮಾವತಿ ಕುಟುಂಬದ ಭೀತಿ ಇರುವ ಹಿನ್ನೆಲೆಯಲ್ಲಿ ಕೇಶವಲು-ಹೇಮಾವತಿ ದಂಪತಿ ಬೈರೆಡ್ಡಿಪಲ್ಲೆ ಗ್ರಾಮದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ಹೇಮಾವತಿಯ ಕುಟುಂಬ ಕೇಶವಲು ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿತ್ತು.

ಒಂದು ವಾರಗಗಳ ಹಿಂದೆ ಹೇಮಾವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶುಕ್ರವಾರ ಪತಿ ಹಾಗೂ ಪತ್ನಿ ಆರೋಗ್ಯ ತಪಾಸಣೆಗೆ ಪಲಮನೇರ್‌ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರು ಹಿಂದಿರುಗುವಾಗ ಹೇಮಾವತಿಯ ಪೋಷಕರಾದ ವೈ. ಭಾಸ್ಕರ್ ನಾಯ್ಡು, ವರಲಕ್ಷ್ಮಿ ಹಾಗೂ ಕೆಲವರು ಸಂಬಂಧಿಕರು ತಡೆದು ನಿಲ್ಲಿಸಿದರು. ಕೇಶವಲುಗೆ ಥಳಿಸಿ ಹೇಮಾವತಿಯನ್ನು ಅಪಹರಿಸಿದರು.

 ‘‘ಅವರು ನನಗೆ ಥಳಿಸಿದರು ಹಾಗೂ ದ್ವಿಚಕ್ರ ವಾಹನದಲ್ಲಿ ಹೇಮಾವತಿಯನ್ನು ಅಪಹರಿಸಿದರು. ಮಗುವನ್ನು ಬಿಟ್ಟು ಹೋದರು. ಪೊಲೀಸ್ ಠಾಣೆಯಲ್ಲಿ ಹೇಮಾವತಿಯೊಂದಿಗೆ ಮಾತನಾಡುವುದಾಗಿ ಅವರು ಹೇಳಿದ್ದರು. ಆದರೆ, ಅವರು ಹೇಮಾವತಿಯನ್ನು ನನ್ನ ಮನೆಯ ಸಮೀಪ ಕರೆದೊಯ್ದರು. ಅಲ್ಲಿ ಆಕೆಯನ್ನು ಹತ್ಯೆಗೈದು ಬಾವಿಗೆ ಎಸೆದರು’’ ಎಂದು ಕೇಶವಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News