ಮಂಗಳೂರು: ಮಲಬಾರ್ ಚಿನ್ನ, ವಜ್ರಾಭರಣ ಮಳಿಗೆಯ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ

Update: 2019-07-01 16:51 GMT

ಮಂಗಳೂರು, ಜು.1: ನಗರದ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಯ ವತಿಯಿಂದ ವಿಶ್ವ ವೈದ್ಯರ ದಿನದ ಅಂಗವಾಗಿ ಯುನಿಟಿ ಹೆಲ್ತ್ ಕೇರ್ ಆಸ್ಪತ್ರೆ ಮತ್ತು ಯುನಿಟಿ ಅಕಾಡೆಮಿ ಆಫ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಹಬೀಬ್‌ ರಹ್ಮಾನ್ ಅವರನ್ನು ಆಸ್ಪತ್ರೆಯಲ್ಲಿ ಸನ್ಮಾನಿಸಲಾಯಿತು.

ಇಂಡಿಯನ್ ಇಕಾನಾಮಿಕ್ ಡೆವಲೆಪ್‌ಮೆಂಟ್ ಮತ್ತು ರೀಸರ್ಚ್ ಎಸೋಸಿಯೇಶನ್ ಸಂಸ್ಥೆಯಿಂದ ಆರೋಗ್ಯಸುಧಾರಣೆ ಮತ್ತು ವೈದ್ಯಕೀಯ ಚಿಕಿತ್ಸೆಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಪ್ರಶಸ್ತಿ ಪಡೆದಿರುವ ಡಾ.ಹಬೀಬ್ ರಹ್ಮಾನ್ ಮಾನವೀಯತೆ ಹೊಂದಿರುವ ಉತ್ತಮ ವೈದ್ಯರಾಗಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಅವರನ್ನು ವೈದ್ಯರ ದಿನದಂದು ಅಭಿನಂದಿಸಲಾಯಿತು ಎಂದು ಮಲಬಾರ್ ಚಿನ್ನ ವಜ್ರಾಭರಣ ಮಳಿಗೆಯ ಪ್ರಕಟಣೆ ತಿಳಿಸಿದೆ.

ಸನ್ಮಾನ ಸಮಾರಂಭದಲ್ಲಿ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಪ್ರದರ್ಶನ ಮಳಿಗೆಯ ಅಸಿಸ್ಟೆಂಟ್ ಶೋ ರೂಂ ಹೆಡ್ ಮುನವರ್, ಇಂಡಿಯನ್ ಮೆಡಿಕಲ್ ಎಸೋಸಿಯೇಶನ್‌ನ ಅಧ್ಯಕ್ಷ ಡಾ.ಸಚ್ಚಿದಾನಂದ ರೈ,ಯುನಿಟಿ ಹೆಲ್ತ್ ಕೇರ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಶ್ಫಾಕ್ ಮೊಹಿಯುದ್ದೀನ್ , ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೊದಲಾದವರು ಉಪಸ್ಥಿತರಿದ್ದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News