ಜು.21: ಕಾಜೂರು ಮಸೀದಿ-ಮದ್ರಸ ಆಡಳಿತ ಸಮಿತಿಗೆ ಚುನಾವಣೆ

Update: 2019-07-03 12:54 GMT

ಮಂಗಳೂರು, ಜು.3: ಬೆಳ್ತಂಗಡಿ ತಾಲೂಕಿನ ಕಾಜೂರಿನ ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್‌ನ ಆಡಳಿತ ಮಂಡಳಿಗೆ 3 ವರ್ಷದ ಅವಧಿಗೆ 11 ಮಂದಿಯ ಆಯ್ಕೆಗೆ ಜು.21ರಂದು ಚುನಾವಣೆ ನಡೆಯಲಿದ್ದು, ಜು.4ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಜು.8ರಿಂದ 12ರವರೆಗೆ ಪೂರ್ವಾಹ್ನ 11ರಿಂದ ಸಂಜೆ 4ರವರೆಗೆ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸಬಹುದು. ಜು.13ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜು.14ರಂದು ನಾಮಪತ್ರ ಹಿಂಪಡೆಯಬಹುದು. ಜು.21ರಂದು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ಚುನಾವಣೆ ನಡೆಯಲಿದೆ. ಅಂದು ಸಂಜೆ 4ಕ್ಕೆ ಫಲಿತಾಂಶ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News