ಆಧಾರ್ ಕಾರ್ಡ್ ಲಿಂಕ್: ಹೆಚ್ಚುವರಿ ಕೇಂದ್ರ ಸ್ಥಾಪಿಸಲು ಮನವಿ
Update: 2019-07-06 13:26 GMT
ಕುಂದಾಪುರ, ಜು.6: ತಾಲೂಕಿನ ಕಟ್ಟಡ ಕಾರ್ಮಿಕ ಸಂಘದ ಸದಸ್ಯರ ಆಧಾರ್ ಕಾರ್ಡಗೆ ಪೋನ್ ನಂಬರ್ ದಾಖಲಿಸುವುದಕ್ಕೆ ತುರ್ತಾಗಿ ವ್ಯವಸ್ಥೆ ಮಾಡಬೇಕು ಮತ್ತು ಹೆಚ್ಚುವರಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಕುಂದಾಪುರ ತಹಶೀಲ್ದಾರ್ ತಿಪ್ಪೆಸ್ವಾಮಿ ಅವರಿಗೆ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಇಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಸುರೇಶ್ ಕಲ್ಲಾಗರ್, ರಮೇಶ್ ಗುಲ್ವಾಡಿ, ಸಂತೋಷ್ ಹೆಮ್ಮಾಡಿ, ವೆಂಕಟೇಶ್ ಕೋಣಿ ಮೊದಲಾದ ವರು ಉಪಸ್ಥಿತರಿದ್ದರು.