ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನಾರ್ತ್ ರೆನ್ ಸಭೆ

Update: 2019-07-06 13:28 GMT

ದುಬೈ, ಜು.6: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನಾರ್ತ್ ರೆನ್ 2019-20ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ದುಬೈಯ ಮಲಬಾರ್ ಹೋಟೆಲ್ನಲ್ಲಿ ರೆನ್ ಅಧ್ಯಕ್ಷ ಅಬ್ದುಲ್ಲಾ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

 ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಕೆಎಚ್ ಉಸ್ತಾದ್ ಅಬುಧಾಬಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಬ್ರಾಹೀಂ ಫೈಝಿ ಕುಪ್ಪೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಂಝ ಎರುಮಾಡ್ ವರದಿ ಮತ್ತು ಕೋಶಾಧಿಕಾರಿ ಅಬೂಬಕರ್ ಕೊಟ್ಟಮುಡಿ ಲೆಕ್ಕ ಪತ್ರ ಮಂಡಿಸಿದರು.

ಅತಿಥಿಗಳಾಗಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಹಮೀದ್ ಸಅದಿ, ಕೋಶಾಧಿಕಾರಿ ಜಲೀಲ್ ನಿಝಾಮಿ, ಇಬ್ರಾಹಿಂ ಬೈಟ್ ಮಾರ್ಬಲ್, ಮೂಸಾ ಹಾಜಿ ಬಸರ, ಅಶ್ರಫ್ ಹಾಜಿ ಅಡ್ಯಾರ್, ಕಲಂದರ್ ಕಬಕ , ಕರೀಂ ಮುಸ್ಲಿಯಾರ್, ಶರೀಫ್ ಸಾಲೆತ್ತೂರು ಭಾಗವಹಿಸಿದ್ದರು.

ಸಮಿತಿಯ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಮದನಿ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಎರುಮಾಡ್ , ಕೋಶಾಧಿಕಾರಿಯಾಗಿ ಅರಾಫತ್ ನಾಪೋಕು ಮತ್ತು 22ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಕಾಜೂರ್ ಇಕ್ಬಾಲ್ ಚುನಾವಣಾಧಿಕಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News