ಮಂಗಳೂರಿನಲ್ಲಿ ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ

Update: 2019-07-06 18:30 GMT

ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಇದರ ಯುವ ಜನ ಪ್ರಸ್ಥಾನವಾದ  ಮುಸ್ಲಿಂ ಯೂತ್ ಲೀಗ್  ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶವು ಮಂಗಳೂರಿನ ಸೂರ್ಯ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. 

ಮುಸ್ಲಿಂ ಲೀಗ್ ದ.ಕ ಜಿಲ್ಲಾಧ್ಯಕ್ಷ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಯೂತ್ ಲೀಗ್ ದ.ಕ ಜಿಲ್ಲಾಧ್ಯಕ್ಷ  ಸಯ್ಯದ್ ಅಫ್ಹಾಮ್ ಅಲೀ ತಂಗಳ್ ಸ್ವಾಗತಿಸಿದರು.

ರಾಷ್ಟ್ರೀಯ  ಸಮಿತಿ ಉಪಾಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಮೊಯೀನಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಮುಸ್ಲಿಂ ಯೂತ್ ಲೀಗ್ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಹಾಗೂ ಪ್ರ.ಕಾರ್ಯದರ್ಶಿ ಆತಿಕ್ ಶೇಟ್ ಪ್ರಾಸ್ತಾವಿಕ ಪ್ರಬಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಉಪಾಧ್ಯಕ್ಷ ಸಿ ಅಹ್ಮದ್ ಜಮಾಲ್, ಯೂತ್ ಲೀಗ್ ರಾಷ್ಟ್ರೀಯ ಸಮಿತಿ ನೇತಾರರಾದ ಸಿ.ಎಲ್ ರಶೀದ್ ಹಾಜಿ, ಅಡ್ವಕೇಟ್ ಹನೀಫ್, ಮುಸ್ಲಿಂ ಲೀಗ್ ಜಿಲ್ಲಾ ನೇತಾರ ಶರೀಫ್ ಬಂಟ್ವಾಳ, ಮುಸ್ಲಿಂ ಯೂತ್ ಲೀಗ್ ಪ್ರ. ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಲಪಾಡಿ, ಸಂಘಟನಾ ಕಾರ್ಯದರ್ಶಿ ಹಿದಾಯತ್ ಮಾರಿಪಲ್ಲ, ಯೂತ್ ಲೀಗ್ ಜಿಲ್ಲಾ ಕೋಶಾಧಿಕಾರಿ ಹೈದರ್ ಕಳಂಜ    ಮುಂತಾದ ಹಲವಾರು ನೇತಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News