ಗಾಂಜಾ ಸೇವನೆ: ಮೂವರ ಬಂಧನ

Update: 2019-07-07 14:53 GMT

ಉಡುಪಿ, ಜು.7: ಪರ್ಕಳ ಹೆರ್ಗ ಗ್ರಾಮದಲ್ಲಿ ಜು.6ರಂದು ಮಧ್ಯಾಹ್ನ ವೇಳೆ ಗಾಂಜಾ ಸೇವಿಸಿದ್ದ ಮೂವರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆರ್ಗಾ ಗ್ರಾಮದ ಆದಿಶಕ್ತಿ ಅಂಗಡಿ ಎದುರು ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಮಹಮ್ಮದ್ ಅನಾಸ್ ಅಶ್ರಫ್(20) ಹಾಗೂ ಹೆರ್ಗಾ ಗ್ರಾಮದ ಶ್ರೀಪಾದ ಟ್ರೇಡರ್ಸ್ ಎದುರು ಕೆಮ್ಮಣ್ಣು ಗುಜ್ಜರಬೆಟ್ಟುವಿನ ತಾಹಿರ್ ಆಸೀಫ್(28) ಮತ್ತು ಶಿರ್ವ ಮಸೀದಿ ಬಳಿಯ ನಿವಾಸಿ ಅಬ್ದುಲ್ ಕಾದೀರ್ (28) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗ ದಲ್ಲಿ ಪರೀಕ್ಷಿಸಲಾಗಿದ್ದು ಇದರಿಂದ ಇವರೆಲ್ಲರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News