ಕಾವೂರು ಸರಕಾರಿ ಪದವಿ ಕಾಲೇಜಿಗೆ ಎಂ.ಆರ್.ಪಿ.ಎಲ್.ನಿಂದ ನೀರಿನ ಟ್ಯಾಂಕ್ ಕೊಡುಗೆ

Update: 2019-07-08 05:36 GMT

ಕಾವೂರು, ಜು.8: ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಎಂ.ಆರ್.ಪಿ.ಎಲ್. ವತಿಯಿಂದ ಸಿಎಸ್ಆರ್ ನಿಧಿಯಿಂದ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ನೀರಿನ ಟ್ಯಾಂಕ್ ಅನ್ನುಶಾಸಕ ಡಾ.ಭರತ್ ಶೆಟ್ಟಿ ವೈ  ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ಕಾಲೇಜು ಎತ್ತರದ ಪ್ರದೇಶದಲ್ಲಿ ಇರುವುದರಿಂದ ನೀರಿನ ಸಮಸ್ಯೆ ಇತ್ತು. ಈ ಸಂಬಂಧ ಮಕ್ಕಳು ಒಂದು ಭಾರಿ ಪ್ರತಿಭಟನೆ ಕೂಡಾ ನಡೆಸಿದ್ದರು. ಇದನ್ನು ಮನಗಂಡು ಎಂ.ಆರ್.ಪಿ.ಎಲ್.ನ್ನು ಸಂಪರ್ಕಿಸಿದಾಗ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ಕಾಲೇಜಿನ ನೀರಿನ ಸಮಸ್ಯೆ ನಿವಾರಣೆ ಆದಂತಾಗಿದೆ ಎಂದರು.

ಸಂಸ್ತೆಯ  ಸಿ.ಎಸ್.ಆರ್. ವಿಭಾಗದ ಜಿ.ಜಿ.ಎಂ.ಬಿ.ಎಚ್.ವಿ.ಪ್ರಸಾದ್, ಚೀಫ್ ಮ್ಯಾನೇಜರ್ ವೀಣಾ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶೋಭಾ ಎಂ.ಕೆ., ಪದವಿ ಕಾಲೇಜಿನ ಪ್ರಾಂಶುಪಾಲೆ ತಾರಾ, ಕಾಲೇಜಿನ ಅಭಿವೃದ್ಧಿ ಸಮಿತಿಯ ಸುಧಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News