ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ

Update: 2019-07-08 17:41 GMT

ಕುಂದಾಪುರ, ಜು.8: ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಕಂದಾವರ ಗ್ರಾಮದ ಉಳ್ಳೂರಿನ ಚಂದ್ರಶೇಖರ ಶೇರಿಗಾರ್ (56) ಎಂಬವರು ರವಿವಾರ ರಾತ್ರಿ ಮನೆಯ ಸಮೀಪದ ಹಾಡಿಯಲ್ಲಿರುವ ಮರವೊಂದಕ್ಕೆ ಬೆಲ್ಟಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಕಳ: ತನಗೆ ಮಕ್ಕಳಾಗಿಲ್ಲ ಎಂಬ ಚಿಂತೆಯಿಂದ ಮನನೊಂದ ಯುವತಿಯೊಬ್ಬಳು ರವಿವಾರ ಅಪರಾಹ್ನ ವಾಸ್ತವ್ಯದ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಟ್ಟೆ ಗ್ರಾಮ ಅತ್ತೂರು ಚೇತನಹಳ್ಳಿ ಎಂಬಲ್ಲಿಂದ ವರದಿಯಾಗಿದೆ.

ಮೃತ ಯುವತಿಯನ್ನು ವಾರಿಜಾ (25) ಎಂದು ಗುರುತಿಸಲಾಗಿದೆ. ವಾರಿಜಾ ಅವರ ವಿವಾಹ ಒಂದೂವರೆ ವರ್ಷದ ಹಿಂದೆ ಮಾರ್ನಾಡು ವಾಸಿ ಶೇಖರ ಎಂಬವರೊಂದಿಗೆ ನಡೆದಿತ್ತು. ಅವರು ಅತ್ತೂರು ಚೇತನಹಳ್ಳಿಯಲ್ಲಿ ವಾಸವಾಗಿದ್ದರು. ವಿಷ ಸೇವಿಸಿ ಅಸ್ವಸ್ಥರಾದ ವಾರಿಜಾರನ್ನು ಮೊದಲು ಕಾರ್ಕಳ ಸರಕಾರಿ ಆಸ್ಪತ್ರೆಗೆ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ರಾತ್ರಿ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News