ಗುಂಪು ಹಿಂಸೆ, ಹತ್ಯೆಗಳನ್ನು ಖಂಡಿಸಿ ಜು.12ಕ್ಕೆ ಪ್ರತಿಭಟನಾ ಮೆರವಣಿಗೆ, ಸಭೆ
Update: 2019-07-08 17:48 GMT
ಉಡುಪಿ, ಜು.8: ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಇದರ ವತಿಯಿಂದ ದೇಶ ವಿರೋಧಿ, ಸಂವಿಧಾನ ವಿರೋಧಿ ಗುಂಪು ಹಿಂಸೆ ಹಾಗೂ ಹತ್ಯೆಗಳನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯೊಂದು ಜು.12ರಂದು ಅಜ್ಜರಕಾಡಿನ ಹುತಾತ್ಮ ಚೌಕದ ಎದುರು ನಡೆಯಲಿದೆ.
ಪ್ರತಿಭಟನಾ ಮೆರವಣಿಗೆ ಅಂದು ಸಂಜೆ 4ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡಿನ ಹುತಾತ್ಮ ಚೌಕದವರೆಗೆ ನಡೆಯಲಿದ್ದು, ಅಲ್ಲಿ 5:30ಕ್ಕೆ ಪ್ರತಿಭಟನಾ ಸಭೆ ನಡೆಯಲಿದೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಸಿಐಟಿಯು ಉಡುಪಿ ಜಿಲ್ಲೆ, ದಲಿತ ದಮನಿತರ ಸ್ವಾಭಿಮಾನಿ ಸಮಿತಿ ಉಡುಪಿ ಜಿಲ್ಲೆ, ಅಂತಾರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ, ಕೆಥೋಲಿಕ ಸಭಾ ಉಡುಪಿ ಜಿಲ್ಲೆ ಹಾಗೂ ಬಹುಜನ ಕ್ರಾಂತಿ ಮೋರ್ಚಾ ಉಡುಪಿ ಇವುಗಳ ಸಹಯೋಗದಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.