ರಾಯ್ಪುರ: ಎನ್ಕೌಂಟರ್ನಲ್ಲಿ ಇಬ್ಬರು ಮಾವೊಗಳು ಸಾವು
ರಾಯ್ಪುರ, ಜು. 14: ಚತ್ತೀಸ್ಗಢದ ದಾಂತೆವಾಡ ಜಿಲ್ಲೆಯ ಬಸ್ತಾರ್ನಲ್ಲಿ ಭದ್ರತಾ ಪಡೆ ರವಿವಾರ ಬೆಳಗ್ಗೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಮಾವೊಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಕೌಂಟರ್ ಬೆಳಗ್ಗೆ ಸುಮಾರು 8 ಗಂಟೆಗೆ ಆರಂಭವಾಯಿತು. ಎರಡು ಗಂಟೆಗಳ ಬಳಿಕ ಅಂತ್ಯಗೊಂಡಿತು ಎಂದು ದಾಂತೆವಾಡದ ಪೊಲೀಸ್ ಅಧೀಕ್ಷಕ ಅಭಿಷೇಕ್ ಪಲ್ಲವ್ ಹೇಳಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ 303 ರೈಫಲ್ ಸಹಿತ ಎರಡು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟ ಮಾವೊಗಳನ್ನು ಮಂಗ್ಲಿ ಹಾಗೂ ದೇವಾ ಎಂದು ಗುರುತಿಸಲಾಗಿದೆ. ಇವರ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಇನ್ನೋರ್ವ ಮಾವೊವಾದಿ ಮಹಿಳೆಯನ್ನು ಬಂಧಿಸಲಾಗಿದೆ. ಮಂಗ್ಲಿ ಮಾಲಿಂಗಿರ್ ಪ್ರದೇಶ ಸಮಿತಿಯ ಸದಸ್ಯೆ ಹಾಗೂ ವಿಭಾಗೀಯ ಸಮಿತಿಯ ಸದಸ್ಯ ಜಗದೀಶ್ ಸೂರಿಯ ಪತ್ನಿ. ದೇವಾ ವಿಭಾಗೀಯ ಕಮಾಂಡರ್ ಹಾಗೂ ಮಾಲಿಂಗಿರ್ ಪ್ರದೇಶ ಸಮಿತಿಯ ಸದಸ್ಯ ಎಂದು ಪಲ್ಲವ ತಿಳಿಸಿದ್ದಾರೆ. ದಾಂತೆವಾಡ ಪೊಲೀಸ್ನ ಡಿಆರ್ಜಿ ತಂಡ ಎನ್ಕೌಂಟರ್ ನಡೆಸಿತು ಎಂದು ಅವರು ತಿಳಿಸಿದ್ದಾರೆ.