ನಾಗುರಿ ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಓಮ್ನಿ: ಚಾಲಕನಿಗೆ ಗಾಯ

Update: 2019-07-15 09:13 GMT

ಮಂಗಳೂರು, ಜು.15: ನಗರದ ಪಡೀಲ್ ಸಮೀಪದ ನಾಗುರಿ ಬಳಿ ಮಾರುತಿ ಓಮ್ನಿಯೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ನಾಗರಿಯಿಂದ ಅಳಪೆ ಕಡೆಗೆ ಚಲಿಸುತ್ತಿದ್ದ ಓಮ್ನಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತು. ಇದರಿಂದ ವಿದ್ಯುತ್ ಕಂಬ ಎರಡು ತುಂಡಾಯಿತಲ್ಲದೆ ಓಮ್ನಿ ಪಲ್ಟಿ ಹೊಡೆದು ರಸ್ತೆಯಿಂದ ಕೆಳಗೆ ಉರುಳಿದೆ. ಇದರಿಂದ ಚಾಲಕ ಗಾಯಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೆಸ್ಕಾಂ ಇಲಾಖೆಯ ಸಿಬ್ಬಂದಿ ವರ್ಗವು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಕಂಬವನ್ನು ಮತ್ತೆ ಅಳವಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳಕ್ಕೆ ಸಂಚಾರ ಪೊಲೀಸರು ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News