​ಟ್ಯಾಲೆಂಟ್ ವತಿಯಿಂದ ಮೊಬೈಲ್ ಟೆಕ್ನಿಶಿಯನ್ ಕೋರ್ಸ್: ಸರ್ಟಿಫಿಕೇಟ್ ವಿತರಣೆ

Update: 2019-07-16 12:10 GMT

ಮಂಗಳೂರು:  ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ವತಿಯಿಂದ ನಡೆಸಲ್ಪಡುವ ಉಚಿತ ಮೊಬೈಲ್ ಟೆಕ್ನಿಶಿಯನ್ ಕೋರ್ಸಿನ 30 ನೇ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಹಾಗೂ ಹೊಸ ಬ್ಯಾಚ್‍ನ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮ್ಯಾಂಗಳೂರು ಮಾರ್ಕೆಟಿಂಗ್ ಇದರ ಆಡಳಿತ ನಿರ್ದೇಶಕ ಬಿ ಬಶೀರ್ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಮತ್ತು ಸಿವಿಲ್ ಕಂಟ್ರಾಕ್ಟರ್‍ಗಳಾದ ಅಬ್ದುಲ್ ವಹಾಬ್ ಮತ್ತು ಮುಸ್ತಫಾ ಅಡ್ಡೂರು, ಟ್ಯಾಲೆಂಟ್ ಸಂಸ್ಥೆಯಲ್ಲೇ ಕಲಿತು ಇದೀಗ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅಬೂಬಕ್ಕರ್ ಸಿದ್ದೀಖ್, ಟಿ.ಆರ್.ಎಫ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಟಿ.ಆರ್.ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಮೊಬೈಲ್ ಟೆಕ್ನಿಶಿಯನ್ ವಿದ್ಯಾರ್ಥಿ ಸಿರಾಜುದ್ದೀನ್ ಖಿರಾಅತ್ ಪಠಿಸಿದರು. ಮೊಬೈಲ್ ಟೆಕ್ನಿಶಿಯನ್ ಶಿಕ್ಷಕ ಅಬ್ದುಲ್ ಮಜೀದ್ ತುಂಬೆ ಸ್ವಾಗತಿಸಿದರು. ಮುಹಮ್ಮದ್ ಯು.ಬಿ ಪ್ರಸ್ತಾವನೆಗೈದರು. ನಕಾಶ್ ಬಾಂಬಿಲ ಸರ್ಟಿಫಿಕೇಟ್ ವಾಚಿಸಿದರು. ಡಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News