ಜುಗಾರಿ: 11 ಮಂದಿ ಬಂಧನ

Update: 2019-07-15 16:26 GMT

ಉಡುಪಿ, ಜು.14: ಹಳ್ಳಾಡಿ-ಹರ್ಕಾಡಿ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಜು.14ರಂದು ಸಂಜೆ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಸ್ಥಳೀಯರಾದ ಅಶೋಕ(48), ಶೇಖರ(32), ರಾಮಕೃಷ್ಣ(44), ಶೇಖರ ಮರಕಾಲ(59), ಭಾಸ್ಕರ ಮೊಗವೀರ(55) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, 4,100ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕೋಟ: ಮಣೂರು ಗ್ರಾಮದ ಕಂಬಳಗದ್ದೆ ಬಳಿ ಜು.14ರಂದು ರಾತ್ರಿ ವೇಳೆ ಗರ್‌ಗರ್ ಮಂಡಲ ಜುಗಾರಿ ಆಡುತ್ತಿದ್ದ ದಿನೇಶ(39), ಉದಯ (29), ಅರವಿಂದ(30), ಪ್ರಶಾಂತ ಪೂಜಾರಿ(27), ವಸಂತ ಶೆಟ್ಟಿ(37), ರಾಘವೇಂದ್ರ(31) ಎಂಬವರನ್ನು ಕೋಟ ಪೊಲೀಸರು ಬಂಧಿಸಿ, 2200ರೂ. ನಗದು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News