ಸರಕಾರ ವಿಶ್ವಾಸ ಮತಗಳಿಸುತ್ತದೆ : ಸಚಿವ ಖಾದರ್

Update: 2019-07-17 05:01 GMT

ಮಂಗಳೂರು : ಸರಕಾರ ವಿಶ್ವಾಸ ಮತಗಳಿಸುತ್ತದೆ. ಸಮ್ಮಿಶ್ರ ಸರಕಾರ ಸ್ಥಿರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿ ರಚನೆಯಾದ ಸರಕಾರ, ಅದರ ನೀತಿ ನಿಯಮಗಳ ಪ್ರಕಾರ ನಡೆಯುತ್ತಿದೆ. ವಿರುದ್ಧವಾಗಿ ನಡೆದುಕೊಂಡವರ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ರಾಜ್ಯದ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚಿಸಲು ಸ್ಪೀಕರ್ ಅವರ ಅನುಮತಿ ಕೇಳಿದ್ದಾರೆ. ಆ ಪ್ರಕಾರ ಸ್ಪೀಕರ್ ಅನುಮತಿ ನೀಡಿದ್ದಾರೆ. ಅದರಂತೆ ಗುರುವಾರ ವಿಶ್ವಾಸ ಮತದ ಮೇಲೆ ಚರ್ಚೆ ಆರಂಭವಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News