ಉತ್ತರ ಪ್ರದೇಶದ ರಾಜ್ಯಪಾಲರಾಗಿ ಆನಂದಿಬೆನ್ ಪಟೇಲ್ ನೇಮಕ

Update: 2019-07-20 08:57 GMT

ಹೊಸದಿಲ್ಲಿ, ಜು.20: ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ  ಗುಜರಾತ್ ನ ಮಾಜಿ ಮುಖ್ಯಮಂತ್ರಿ  ಆನಂದಿಬೆನ್ ಪಟೇಲ್ ರನ್ನು ಉತ್ತರ ಪ್ರದೇಶದ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ.

ಹಲವು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದ್ದು,  ಸುಪ್ರಿಂ ಕೋರ್ಟ್ ನ ಹಿರಿಯ ವಕೀಲ ಜಗದೀಪ್ ಧನಕ್ಕರ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಬಿಜೆಪಿ ಎಂಎಲ್ ಎ ಫಾಗು ಚೌಹಾಣ್ – ಬಿಹಾರ,  ಬಿಜೆಪಿ ಧುರೀಣ ರಮೇಶ್ ಬಯಾಸ್ - ತ್ರಿಪುರಾ,  ಲಾಲಾ ಜಿ ಟಂಡನ್ –ಬಿಹಾರ ಮತ್ತು ನಾಗಲ್ಯಾಂಡ್ ರಾಜ್ಯಪಾಲರಾಗಿ ಆರ್. ಎನ್.ರವಿ  ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News