ಲಾಡ್ಜ್‌ನಲ್ಲಿ ಅಂದರ್ ಬಾಹರ್: 19 ಮಂದಿ ಬಂಧನ

Update: 2019-07-20 17:00 GMT

ಮಣಿಪಾಲ, ಜು.20: ಈಶ್ವರ ನಗರದ ಆಶ್ಲೇಷ್ ಹೋಟೇಲ್ನ ಎರಡು ರೂಮ್‌ಗಳಲ್ಲಿ ಜು.19ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಒಟ್ಟು 19 ಮಂದಿಯನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ರೂಮ್ ನಂಬ್ರ 219ರಲ್ಲಿ ಕಿದಿಯೂರಿನ ಸುಧಾಕರ ಅಮೀನ್(43), ಮಲ್ಪೆಯ ಜಗದೀಶ್(44), ಕುಂದಾಪುರದ ಸುಕುಮಾರ(29), ಸುಜಿತ್(33), ಶರಣ್(25), ಹರೀಶ್(32), ಶಾಹಿದ್(29), ರಾಕೇಶ್ ದೇವಾಡಿಗ(31), ರಮೇಶ(41), ಸಂತೋಷ(33), ಕೊಡವೂರಿನ ಶಂಕರ(33), ಶರೀಫ್(31), ಹೆಮ್ಮಾಡಿಯ ಅಬ್ದುಲ್ ಮುನೀರ್(28), ಕೆಮ್ಮಣ್ಣುವಿನ ಯೋಗೀಶ್(29) ಎಂಬವರನ್ನು ಬಂಧಿಸಿ, 12 ಮೊಬೈಲ್, 1,22,425ರೂ. ನಗದು ವಶಪಡಿಸಿ ಕೊಳ್ಳಲಾಗಿದೆ.

ರೂಮ್ ನಂಬ್ರ 212ರಲ್ಲಿ ಹಿರಿಯಡ್ಕದ ಜ್ಞಾನೇಶ್ ಶೆಟ್ಟಿ(42), ಮುಂಬೈಯ ಶೈಲೇಶ್ ಸನಿಲ್(53), ಕೊಪ್ಪಳದ ಅಂಬರೀಷ್(43), ಈಶ್ವರ ನಗರದ ಉಮೇಶ್ ಸಾಲಿಯಾನ್(47), ಬನ್ನಂಜೆಯ ಭಾಸ್ಕರ(62) ಎಂಬವರನ್ನು ಬಂಧಿಸಿ, 33,725 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News