ಜು.22ರಂದು ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಯತ್ ಕಾಲೇಜ್ ಉದ್ಘಾಟನೆ

Update: 2019-07-20 18:14 GMT

ಮಂಗಳೂರು: ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಷನ್ ಬೊಳ್ಳೂರು ಇದರ ವತಿಯಿಂದ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಯತ್ ಕಾಲೇಜಿನ ಉದ್ಘಾಟನಾ ಸಮಾರಂಭವು ಜು.22ರಂದು ಶಂಶುಲ್ ಉಲಮಾ ಮೆಮೋರಿಯಲ್ ಫೌಂಡೇಷನ್ ಸಭಾಂಗಣ ಬೊಳ್ಳೂರಿನಲ್ಲಿ ನಡೆಯಲಿದೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾದ್ಯಕ್ಷರಾದ ಶೈಖುನಾ ಬೊಳ್ಳೂರು ಉಸ್ತಾದ್ ವಹಿಸಲಿರುವರು. ಬಹು ಇರ್ಷಾದ್ ದಾರಿಮಿ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಪ್ರಭಾಷಣಗಾರರಾಗಿ ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್ ಬಿ ಮಹಮ್ಮದ್ ದಾರಿಮಿ ಆಗಮಿಸಲಿದ್ದು, ಸಯ್ಯಿದ್ ಕೆ. ಎಸ್ ಆಲಿ ತಂಙಳ್ ಕುಂಬೋಲ್ ದುಆ ಮತ್ತು ಶರೀಯತ್ ತರಗತಿ ಉದ್ಘಾಟಣಾ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News