ಕೊಳ್ನಾಡು, ಸಾಲೆತ್ತೂರು ನೂತನ ಎಸ್ ಡಿ ಪಿ ಐ ವಲಯ ಸಮಿತಿ ಆಯ್ಕೆ

Update: 2019-07-23 07:08 GMT

ಮಂಗಳೂರು: ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಳ್ನಾಡು ಮತ್ತು ಸಾಲೆತ್ತೂರು ವಲಯ ಸಮಿತಿ ಸಭೆಯು ಎಸ್ ಡಿ ಪಿ ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ ನೇತೃತ್ವದಲ್ಲಿ ಜರುಗಿತು.

2019 ರಿಂದ 2021ನೇ ಸಾಲಿಗೆ ನೂತನ ವಲಯ ಸಮಿತಿಯನ್ನು ಆಂತರಿಕ ಚುನಾವಣೆಯ ಮುಖಾಂತರ ಆರಿಸಲಾಗಿ ನೂತನ ವಲಯ ಸಮಿತಿಯ ಅಧ್ಯಕ್ಷರಾಗಿ ಸುಲೈಮಾನ್ ಎಚ್ ಎಸ್ ಎಸ್, ಉಪಾಧ್ಯಕ್ಷರಾಗಿ ಹಸೈನಾರ್ ಎಸ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಎಸ್ ಎನ್, ಕಾರ್ಯದರ್ಶಿಯಾಗಿ ಫಾರೂಕ್ ಸಾಲೆತ್ತೂರು, ಖಜಾಂಚಿಯಾಗಿ ಅಶ್ರಫ್ ಕುಳಾಲು ಮತ್ತು ಕೌನ್ಸಿಲರ್ ಆಗಿ  ಬಶೀರ್ ಕೊಳ್ನಾಡು ಇವರನ್ನು ಆಯ್ಕೆ ಮಾಡಲಾಯಿತು.

ಚುನಾವಣಾ ಅಧಿಕಾರಿಯಾಗಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ ಮತ್ತು ಬಂಟ್ವಾಳ ಪುರಸಭಾ ಕಾರ್ಯದರ್ಶಿಯಾದ ಅನ್ವರ್ ಆಲಡ್ಕ ಮತ್ತು ವೀಕ್ಷಕರಾಗಿ ಪೈಝಲ್ ಮಂಚಿ ಕಾರ್ಯ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News