ಗೋವನ್ನು ‘ಪ್ರಾಣಿ’ ಎಂದರೆ ಜನತೆಯ ಭಾವನೆಗಳಿಗೆ ನೋವಾಗುತ್ತದೆ ಎಂದ ಬಿಜೆಪಿ ನಾಯಕ

Update: 2019-07-23 18:32 GMT

ಜೈಪುರ,ಜು.23: ಗೋವು ಒಂದು ‘ಪ್ರಾಣಿ’ ಎಂಬ ರಾಜ್ಯದ ಸಚಿವ ಶಾಂತಿಕುಮಾರ ಧಾರಿವಾಲ್ ಅವರ ಹೇಳಿಕೆಯನ್ನು ಮಂಗಳವಾರ ಖಂಡಿಸಿರುವ ಬಿಜೆಪಿ ನಾಯಕ ವಾಸುದೇವ ದೇವ್ನಾನಿ ಅವರು, ಗೋವನ್ನು ಜನರು ಮಾತೆಯಂತೆ ಪೂಜಿಸುತ್ತಿದ್ದಾರೆ ಮತ್ತು ಸಚಿವರ ಹೇಳಿಕೆಯಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ರಾಜಸ್ಥಾನ ವಿಧಾನಸಭೆಯಲ್ಲಿ ಮಾತನಾಡಿದ ಸಂದರ್ಭ ಧಾರಿವಾಲ್ ಅವರು,ಗೋವು ಅತ್ಯಂತ ಉಪಯೋಗಿಯಾಗಿರುವ ಪ್ರಾಣಿಯಾಗಿದೆ, ಆದರೆ ಅದನ್ನು ಆರಾಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹಿಂದು ರಾಷ್ಟ್ರವಾದಿ ವಿ.ಡಿ ಸಾವರ್ಕರ್ ಅವರ ಪುಸ್ತಕದಲ್ಲಿಯ ಉಕ್ತಿಗಳನ್ನು ಉಲ್ಲೇಖಿಸಿ ಹೇಳಿದ್ದರು.

ರಾಷ್ಟ್ರವಾದವನ್ನೂ ತರಾಟೆಗೆತ್ತಿಕೊಂಡಿದ್ದ ಧಾರಿವಾಲ್,ದೇಶದ ಜನಸಂಖ್ಯೆಯಲ್ಲಿ 22 ಕೋಟಿಗಳಷ್ಟಿರುವ ಮುಸ್ಲಿಮರನ್ನು ಒಳಗೊಳ್ಳದ ರಾಷ್ಟ್ರವಾದವನ್ನು ಊಹಿಸಲೂ ಸಾಧ್ಯವಿಲ್ಲ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News