ಕನ್ಯಾರಕೋಡಿ: ಸುನ್ನಿ ಬಾಲ ಸಂಘ ಪುಣರ್ ರಚನೆ

Update: 2019-07-24 08:20 GMT

ಉಪ್ಪಿನಂಗಡಿ: ಸುನ್ನಿ ಬಾಲ ಸಂಘ (ಎಸ್ ಬಿ ಎಸ್) ಇದರ ವಾರ್ಷಿಕ ಮಹಾಸಭೆಯು ಸ್ಥಳೀಯ ಖತೀಬ್ ಉಸ್ತಾದ್ ಎ.ಕೆ. ಇಬ್ರಾಹಿಂ ಸಅದಿ ನೇತೃತ್ವದಲ್ಲಿ ನಡೆಯಿತು. ಕರೀಮ್ ಮದನಿ ಚಾಲನೆ ನೀಡಿದರು. ವಿದ್ಯಾರ್ಥಿ ಮುಸ್ತಫ ಖಿರಾಅತ್ ಪಠಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ವಹಿಸಿದ್ದರು. ಮುಸ್ತಫ ಮದನಿ ಸ್ವಾಗತಿಸಿ, ಜಮಾಅತ್ ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಖದರ್ ಮದನಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ. ಜಿಲ್ಲೆ ಇದರ ಸದಸ್ಯ ಮುಹಮ್ಮದ್ ಮುಸ್ತಫ ಉರುವಾಲುಪದವು ಮಾತನಾಡಿದರು.

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಮುಖವಾಣಿ ಸುನ್ನತ್ ಪ್ರಚಾರ ಅಭಿಯಾನ ಪ್ರಯುಕ್ತ  ಕುಪ್ಪೆಟ್ಟಿ ರೇಂಜ್'ಗೊಳಪಟ್ಟ ಕನ್ಯಾರಕೋಡಿ ಹಿದಾಯತುಲ್ ಇಸ್ಲಾಮ್ ಮದ್ರಸದ ಎಸ್ ಬಿ ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಎಸ್ ಬಿ ಎಸ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಎ.ಕೆ. ಇಬ್ರಾಹೀಂ ಸಅದಿ, ಮುದಬ್ಬಿರ್ : ಎಸ್ ಪಿ ಮುಸ್ತಫ ಮದನಿ, ಅಶ್ರಫ್ ಮುಸ್ಲಿಯಾರ್, ನಿರ್ದೇಶಕರು : ಅಬೂಬಕ್ಕರ್ ಹಾಜಿ ಕನ್ಯಾರ, ಅಧ್ಯಕ್ಷರಾಗಿ ಬಿಜೆಎಂ ಕನ್ಯಾರಕೋಡಿ, ವಿ.ಎಚ್. ಅಬ್ದುಲ್ ಖಾದರ್ ಮದನಿ, ಪ್ರ.ಕಾರ್ಯದರ್ಶಿಯಾಗಿ ಬಿಜೆಎಂ ಕನ್ಯಾರಕೋಡಿ, ಅಧ್ಯಕ್ಷರಾಗಿ ಸ್ವಾಲೀಹ್, ಉಪಾಧ್ಯಕ್ಷರಾಗಿ ಬಶ್ಶಾರ್, ಪ್ರ.ಕಾರ್ಯದರ್ಶಿಯಾಗಿ ನಿಯಾಝ್, ಜೊ.ಕಾರ್ಯದರ್ಶಿಯಾಗಿ ತನೂಫ್, ನಸೀಹ್, ಕೋಶಾಧಿಕಾರಿಯಾಗಿ ಮುಸ್ತಫಾ, ಸದಸ್ಯರುಗಳಾಗಿ ಮರ್ಷಾದ್, ಮಿದ್ಲಾಜ್ ಎಂ, ಮಿದ್ಲಾಜ್ ಟಿ, ಶಾಹಿದ್, ಸಲಾಹುದ್ದೀನ್, ರಾಝಿಕ್, ಸುಹೈಲ್, ಮುಬಶ್ಶಿರ್, ‌ಶಿಫಾನ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News