ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

Update: 2019-07-29 15:36 GMT

ಮಂಜನಾಡಿ: ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್, ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಬ್ಲಡ್ ಸೈಬೋ ಇದರ ಆಶ್ರಯದಲ್ಲಿ ಯೆನೆಪೊಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಮಂಜನಾಡಿಯ ಅನ್ಸಾರ್ ನಗರ ಮದ್ರಸ ವಠಾರದಲ್ಲಿ ನಡೆಯಿತು.

ಶಾಸಕ ಯುಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಬ್ಲಡ್ ಸೈಬೋ ನೇತಾರ ಇಬ್ರಾಹಿಂ ಕದ್ಕಾರ್, ಇಬ್ರಾಹಿಂ ಹಾಜಿ ಪಾರೆ, ಕೆಎಂಕೆ ಮಾಸ್ಟರ್ ಮಂಜನಾಡಿ, ಅನ್ಸಾರ್ ನಗರ ಮಸ್ಜಿದ್ ಇಮಾಮ್ ಫಾರೂಕ್ ಸಖಾಫಿ, ಎಸ್ಸೆಸ್ಸೆಫ್ ಕೊಳ್ಳರಕೋಡಿ ಶಾಖಾಧ್ಯಕ್ಷ ಆಸಿಫ್ ಕೆ.ಎಚ್, ಮಜೀದ್ ಆರಂಗಡಿ, ಶರೀಫ್ ಕಲ್ಕಟ್ಟ, ಅನ್ಸಾರ್ ನಗರ ಮಸ್ಜಿದ್ ಅಧ್ಯಕ್ಷ ಹಮೀದ್ ಹಾಜಿ, ಎಸೆಸ್ಸೆಫ್ ಅನ್ಸಾರ್ ನಗರ ಶಾಖಾಧ್ಯಕ್ಷ ಸತ್ತಾರ್ ಸಅದಿ, ಆಸಿಫ್ ಅನ್ಸಾರ್ ನಗರ, ಎಸ್ಸೆಸ್ಸೆಫ್ ಮಂಜನಾಡಿ ಬ್ಲಡ್ ಸೈಬೋ ಅಧ್ಯಕ್ಷ ಫಾರೂಕ್ ಸುನ್ನಂಗಳ, ಅನೀಸ್ ಕೊಳ್ಳರಕೋಡಿ, ಇಲ್ಯಾಸ್ ಪೊಟ್ಟೋಲಿಕೆ ಮುಂತಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಕಾರ್ಯದರ್ಶಿ ಮುಹಿಯ್ಯದ್ದೀನ್ ಮೋರ್ಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News